Advertisement

ವಿಎಚ್‌ಪಿ, ಬಜರಂಗ ದಳ ಪೋಸ್ಟರ್‌ನಲ್ಲಿ ಬುಲಂದ್‌ಶಹರ್‌ ಮುಖ್ಯ ಆರೋಪಿ

01:36 PM Jan 14, 2019 | udayavani editorial |

ಮೀರಟ್‌: ಬುಲಂದ್‌ಶಹರ್‌ ಹಿಂಸಾ ಪ್ರಕರಣದ ಮುಖ್ಯ ಆರೋಪಿಯಾಗಿರುವ ಬಜರಂಗ ದಳದ ಸಂಚಾಲಕ ಯೋಗೇಶ್‌ ರಾಜ್‌, ಜನರಿಗೆ ಮಕರ ಸಂಕ್ರಾತಿ ಮತ್ತು ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುವ ವಿಎಚ್‌ಪಿ ಮತ್ತು ಬಜರಂಗ ದಳದ ಹಲವು ಪೋಸ್ಟರ್‌ ಗಳು ಬುಲಂದ್‌ಶಹರ್‌ ಜಿಲ್ಲೆಯಲ್ಲಿ ಕಂಡು ಬಂದಿವೆ. 

Advertisement

ಈ ಪೋಸ್ಟರ್‌ಗಳಲ್ಲಿ ಬುಲಂದ್‌ಶಹರ್‌ ಹಿಂಸಾ ಪ್ರಕರಣದ ಇತರ ಆರೋಪಿಗಳಾಗಿರುವ ಸತೀಶ್‌ ಲೋಧಿ, ಆಶಿಶ್‌ ಚೌಹಾಣ್‌, ಸತ್ಯೇಂದ್ರ ರಾಜಪೂತ್‌ ಮತ್ತು ವಿಶಾಲ್‌ ತ್ಯಾಗಿ ಫೋಟೊಗಳು ಕೂಡ ಇವೆ. 

ಯೋಗೇಶ್‌ ರಾಜ್‌ ನನ್ನು ಪೊಲೀಸರು ಇದೇ ಜನವರಿ 3ರಂದು ಬಂಧಿಸಿದ್ದಾರೆ. ಈ ಹಿಂಸಾ ಪ್ರಕರಣದಲ್ಲಿ ಓರ್ವ ಪೊಲೀಸ್‌ ಅಧಿಕಾರಿ ಮತ್ತು ಓರ್ವ ತರುಣ ಪೌರ ಹತ್ಯೆಗೀಡಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next