Advertisement

ಪೊಲೀಸರನ್ನು ತಳ್ಳಿ ಕೋರ್ಟ್ ನ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕೊಲೆ ಆರೋಪಿ

03:36 PM Apr 13, 2022 | Team Udayavani |

ಬೆಂಗಳೂರು: ತನ್ನದೇ ಮಕ್ಕಳನ್ನು ಕೊಲೆಗೈದ ಆರೋಪಿಯೋರ್ವ ಕೋರ್ಟ್ ವಿಚಾರಣೆಗೆ ಬರುವ ವೇಳೆ ಪೊಲೀಸರನ್ನು ತಳ್ಳಿ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಡೆದಿದೆ.

Advertisement

ಜತೀನ್ ಎಂಬಾತ ಕಟ್ಟಡದಿಂದ ಕೆಳ ಬಿದ್ದಿರುವ ಆರೋಪಿಯಾಗಿದ್ದಾನೆ.

ಘಟನೆಯ ಹಿನ್ನೆಲೆ: 2020 ರ ಮಾರ್ಚ್ 21 ರಂದು ಜತೀನ್ ತನ್ನದೇ ಹೆಣ್ಣುಮಕ್ಕಳಾದ ತೌಶಿಣಿ (3) ಶಾಸ್ತ (1.5) ರನ್ನು ಕೊಲೆ ಮಾಡಿದ್ದ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆ ಬಳಿಕ ಜತೀನ್ ನನ್ನು ಬಂಧಿಸಲಾಗಿತ್ತು.

ಜೈಲಿನಲ್ಲಿ ಇದ್ದ ಆರೋಪಿ ಜತೀನ್, ಅಲ್ಲಿಂದಲ್ಲೇ ಪತ್ನಿಗೆ ಕರೆ ಮಾಡಿ ಆಗಾಗ ಕೊಲೆ ಬೆದರಿಕೆ ಹಾಕುತ್ತಿದ್ದ. ಪತ್ನಿ ಪತಿ ವಿರುದ್ಧ ಈ ಬಗ್ಗೆ ದೂರು ದಾಖಲಿಸಿ, ಗಂಡನಿಗೆ ಮೊಬೈಲ್ ಕೊಡಬೇಡಿ ಎಂದಿದ್ದರು.

ವಿಚಾರಣಾಧೀನ ಕೈದಿಯಾಗಿರುವ ಜತೀನ್ ನನ್ನು ವಿಚಾರಣೆಗೆಂದು ಇಂದು ಪೊಲೀಸರು ಕೋರ್ಟಿಗೆ ಕರೆತಂದಿದ್ದರು. ಈ ವೇಳೆ ಪೊಲೀಸರನ್ನು ತಳ್ಳಿ ಆರೋಪಿ ಜತೀನ್ ಮೂರನೇ ಮಹಡಿಗೆ ಹತ್ತಿ,ಅಲ್ಲಿಂದ ಹಾರಿದ್ದಾನೆ. ಸದ್ಯ ಜತೀನ್ ಸ್ಥಿತಿ ಗಂಬೀರವಾಗಿದೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next