Advertisement

ನಿಕ್ಕಿ ಯಾದವ್ ಹತ್ಯೆ ಕೇಸ್: ಸಾಹಿಲ್ ಗೆಹ್ಲೋಟ್ ನ ತಂದೆ ಸೇರಿ ಐವರ ಬಂಧನ

09:35 AM Feb 18, 2023 | Team Udayavani |

ಹೊಸದಿಲ್ಲಿ: ನಿಕ್ಕಿ ಯಾದವ್ ಹತ್ಯೆ ಪ್ರಕರಣದಲ್ಲಿ ಪಿತೂರಿಯಲ್ಲಿ ತನ್ನ ಮಗನಿಗೆ ಸಹಾಯ ಮಾಡಿದ ಆರೋಪದ ಮೇಲೆ ಪ್ರಮುಖ ಆರೋಪಿ ಸಾಹಿಲ್ ಗೆಹ್ಲೋಟ್ ತಂದೆ ಸೇರಿದಂತೆ ದೆಹಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಕೊಲೆಯ ಸಂಚು ರೂಪಿಸುವಲ್ಲಿ ಸಾಹಿಲ್ ಗೆಹ್ಲೋಟ್ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ಸಾಹಿಲ್‌ ನ ತಂದೆ ವೀರೇಂದ್ರ ಸಿಂಗ್, ಸೋದರ ಸಂಬಂಧಿಗಳಾದ ಆಶಿಶ್ ಮತ್ತು ನವೀನ್ ಮತ್ತು ಆತನ ಸ್ನೇಹಿತರಾದ ಅಮರ್ ಮತ್ತು ಲೋಕೇಶ್ ಅವರನ್ನು ಕೊಲೆಯಲ್ಲಿ ಪಾತ್ರವಹಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಕ್ರೈಂ ಬ್ರಾಂಚ್ ಮೂಲಗಳು ತಿಳಿಸಿದೆ.

” ವೀರೇಂದ್ರ ಸಿಂಗ್‌ ಗೆ ತನ್ನ ಮಗನ ಕೃತ್ಯದ ಬಗ್ಗೆ ತಿಳಿದಿತ್ತು ಎಂಬ ವಿಚಾರ ತಿಳಿದ ನಂತರ ಅವರನ್ನು ಬಂಧಿಸಲಾಗಿದೆ. ಆತನ ವಿರುದ್ಧ ಐಪಿಸಿಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸಾಹಿಲ್ ಗೆಹ್ಲೋಟ್‌ ನ ಸ್ನೇಹಿತ, ಸೋದರಸಂಬಂಧಿ ಮತ್ತು ಸಹೋದರ ಸೇರಿದಂತೆ ನಾಲ್ವರು ಬಂಧಿಸಲಾಗಿದೆ” ಎಂದು ವಿಶೇಷ ಸಿಪಿ ರವೀಂದರ್ ಯಾದವ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ನಿಕ್ಕಿ ಯಾದವ್ ಅವರನ್ನು ಸಾಹಿಲ್ ಗೆಹ್ಲೋಟ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಂಗಳವಾರ ಆತನ ಬಂಧನವಾಗಿದ್ದು, ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next