Advertisement

6 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಸೆರೆ

10:58 AM Jan 20, 2018 | Team Udayavani |

ಮುಜಫ‌ರನಗರ : ವಿವಿಧ ಅಪರಾಧ ಪ್ರಕರಣಗಳ ಆರೋಪಿಯಾಗಿದ್ದುಕೊಂಡು ಕಳೆದ ಆರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಹಳ್ಳಿಯೊಂದರ ಅರಣ್ಯ ಪ್ರದೇಶದಲ್ಲಿ ಬಂಧಿಸಿದ್ದಾರೆ.

Advertisement

ಆರೋಪಿಯ ಹೆಸರು ಕಮಾಲ್‌ ಹಸನ್‌. ಈತನನ್ನು ಹುಡುಕಿಕೊಟ್ಟವರಿಗೆ 10,000 ರೂ. ಇನಾಮು ಘೋಷಿಸಲಾಗಿತ್ತು. 

ಪೊಲೀಸರು ಈತನನ್ನು ಇಚೋಡಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬಂಧಿಸಿದರು ಎಂದು ರತೇನ್‌ಪುರಿ ಪೊಲೀಸ್‌ ಸ್ಟೇಶನ್‌ ಇನ್ಸ್‌ಪೆಕ್ಟರ್‌ ಶಿವ ಕುಮಾರ್‌ ಹೇಳಿದರು.

2012ರಲ್ಲಿ ಇಬ್ಬರು ಅರ್ಚಕರನ್ನು ಗುಂಡಿಟ್ಟು ಕೊಲ್ಲಲಾದ ಮಾನಪುರ ಆಶ್ರಮ ದರೋಡೆ ಪ್ರಕರಣ ಸಹಿತ ಆರೋಪಿ ಹಸನ್‌ ಪೊಲೀಸರಿಗೆ ಬೇಕಾಗಿದ್ದ ಎಂದವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next