Advertisement

Kumble; ವಿವಿಧ ಅಪರಾಧ ಕೃತ್ಯಗಳ ಆರೋಪಿ ಸೆರೆ

11:20 PM Aug 23, 2023 | Team Udayavani |

ಕುಂಬಳೆ: ಹತ್ಯೆ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಬಂದ್ಯೋಡು ಅಡ್ಕ ಬೈದಲದ ಅಬ್ದುಲ್‌ ಲತೀಫ್‌ ಯಾನೆ ಕಳಿತ್ತೋಕ್‌ ಲತೀಫ್‌ ವಿರುದ್ಧ ಕಾಪಾ ಪ್ರಕಾರ ಕೇಸು ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

Advertisement

ಆತ ಅಡ್ಕ ಬೈದಲದ ಮುಜೀಬ್‌ ರಹ್ಮಾನ್‌ ಅವರ ಮನೆಗೆ ನುಗ್ಗಿ ಕೊಲೆ ಯತ್ನ ನಡೆಸಿದ, ಕಾರಿಗೆ ಹಾನಿಗೈದ ಆರೋಪಿಯಾಗಿದ್ದಾನೆ. ಇದು ಸಹಿತ 9 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದೆ. ಉಪ್ಪಳದ ಅಲ್ತಾಫ್‌ ಹತ್ಯೆ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. ಅಲ್ಲದೆ ಮೂರು ಹತ್ಯೆ ಯತ್ನ ಪ್ರಕರಣ, ಒಂದು ದರೋಡೆ ಪ್ರಕರಣ ಹಾಗೂ ಮಂಜೇಶ್ವರ ಪೊಲೀಸರಿಗೆ ಕೋವಿ ತೋರಿಸಿ ಬೆದರಿಕೆಯೊಡ್ಡಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. ಈತ ಇದೀಗ ಕಣ್ಣೂರು ಸೆಂಟ್ರಲ್‌ ಜೈಲ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಮದ್ಯ ಸಹಿತ ವ್ಯಕ್ತಿಯ ಬಂಧನ, ಬೈಕ್‌ ವಶಕ್ಕೆ
ಮಂಜೇಶ್ವರ: ಬಾಯಾರು ಗ್ರಾಮದ ಧರ್ಮತ್ತಡ್ಕದಲ್ಲಿ ಕಾಸರಗೋಡು ಅಬಕಾರಿ ಸ್ಪೆಷಲ್‌ ಸ್ಕ್ವಾಡ್‌ ನಡೆಸಿದ ಕಾರ್ಯಾಚರಣೆಯಲ್ಲಿ 12.96 ಲೀಟರ್‌ ಮದ್ಯ ವಶಪಡಿಸಿ ಕೊಳ್ಳಲಾಗಿದೆ.

ಈ ಸಂಬಂಧ ಧರ್ಮತ್ತಡ್ಕದ ಶಿವಪ್ರಸಾದ್‌ (41)ನನ್ನು ಬಂಧಿಸಿದೆ. ಮದ್ಯ ಸಾಗಿಸಲು ಬಳಸಿದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next