Advertisement

Sullia ತೋಟದಿಂದ ಕಳ್ಳತನ ಆರೋಪ

12:34 AM Mar 04, 2024 | Team Udayavani |

ಸುಳ್ಯ: ತೋಟಕ್ಕೆ ಅಕ್ರಮ ಪ್ರವೇಶಿಸಿ ಕಳ್ಳತನ ಮಾಡಲಾಗಿದೆ ಎಂಬ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಐವರ್ನಾಡಿನ ಚಂದ್ರಶೇಖರ ಎ. ಅವರು ತಮ್ಮ ತೋಟಕ್ಕೆ ನೀರು ಹಾಯಿಸಲು ತೆರಳಿದ್ದಾಗ ಪ್ರಮೋದ್‌ ಮತ್ತು ಅಪೂರ್ವ ಅವರು ತೋಟಕ್ಕೆ ಅಕ್ರಮ ಪ್ರವೇಶಿಸಿ, ಒಟ್ಟು 16 ಸಾವಿರ ರೂ. ಮೌಲ್ಯದ 100 ಮೀಟರ್‌ ಉದ್ದದ ವಿದ್ಯುತ್‌ ಕೇಬಲ್‌ಗ‌ಳು ಮತ್ತು ಒಂದು ಅಲ್ಯೂಮಿನಿಯಂ ಏಣಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಪ್ರತಿದೂರು
ತೋಟಕ್ಕೆ ಅಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿ ಐವರ್ನಾಡಿನ ಅಪೂರ್ವ ಪ್ರತಿದೂರು ಸಲ್ಲಿಸಿದ್ದಾರೆ. ತಾನು ಮತ್ತು ಪತಿ ತೋಟಕ್ಕೆ ತೆರಳಿದ ವೇಳೆ ಚಂದ್ರಶೇಖರ ಮತ್ತು ಕುಸುಮಾಧರ ಅವರು ನಮ್ಮ ತೋಟಕ್ಕೆ ಅಕ್ರಮ ಮಾಡಿ ಪಂಪ್‌ಶೆಡ್‌ನಿಂದ ಬೋರ್‌ವೆಲ್‌ಗೆ ಹಾಕಿರುವ ಕೇಬಲ್‌ಗ‌ಳನ್ನು ತೆಗೆದುಹಾಕಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next