Advertisement

Hassan: ಶಿಕ್ಷಕಿಯನ್ನು ಅಪಹರಿಸಿದ ಆರೋಪಿ ನೆಲ್ಯಾಡಿಯಲ್ಲಿ ಸೆರೆ

12:04 AM Dec 02, 2023 | Team Udayavani |

ಹಾಸನ: ಮದುವೆಯಾಗಲು ಒಪ್ಪದ ಖಾಸಗಿ ಶಾಲಾ ಶಿಕ್ಷಕಿಯನ್ನು ಅಪಹರಿಸಿದ್ದ ಯುವಕ ಪೊಲೀಸರ ಬಲೆಗೆ ಬಿದ್ದಿದ್ದು, ಶಿಕ್ಷಕಿಯನ್ನು ಪೋಷಕರಿಗೆ ಒಪ್ಪಿಸಲಾಗಿದೆ.

Advertisement

ಗುರುವಾರ ಬೆಳಗ್ಗೆ ಶಿಕ್ಷಕಿ ಅರ್ಪಿತಾಳನ್ನು ರಾಮು ಎಂಬಾತ ತನ್ನ ಸಂಗಡಿಗರೊಂದಿಗೆ ಇನ್ನೋವಾ ಕಾರಿನಲ್ಲಿ ಅಪಹರಿಸಿದ್ದ. ಮಾಹಿತಿ ಪಡೆದ ಪೊಲೀಸರು ಅಪಹರಣಕಾರರ ಮೊಬೈಲ್‌ ನೆಟ್‌ವರ್ಕ್‌ ಆಧರಿಸಿ ಬೆನ್ನಟ್ಟಿದ್ದರು. ಇನ್ನೋವಾ ಕಾರಿನ ಜತೆ ಮಾರ್ಗ ಮಧ್ಯೆ ಮತ್ತೂಂದು ಕಾರು ಅಪಹರಣಕಾರರ ಜತೆ ಸೇರಿಕೊಂಡಿತ್ತು. ಕಾರುಗಳು ಸೋಮವಾರಪೇಟೆ ಕಡೆಗೆ ಹೊರಟ ಮಾಹಿತಿ ಪಡೆದ ಪೊಲೀಸರು ಹಿಂಬಾಲಿಸಿದರು. ಅಪಹರಣಕಾರರು ಕೆಲಕಾಲ ತಮ್ಮಲ್ಲಿದ್ದ ಮೊಬೈಲ್‌ ಫೋನ್‌ಗಳ ಸ್ವಿಚ್‌ ಆಫ್ ಮಾಡಿದ್ದರು. ಅನಂತರ ದಕ್ಷಿಣ ಕನ್ನಡ ಜಿಲ್ಲೆ ನೆಲ್ಯಾಡಿ ಕಡೆ ಹೊರಟರು. ಆದರೆ ಪೊಲೀಸರು ಮತ್ತೆ ಹಿಂಬಾಲಿಸುತ್ತಿರುವ ಮಾಹಿತಿ ಸಿಕ್ಕ ಕೂಡಲೇ ಅಪಹರಣಕಾರರು ಅರ್ಪಿತಾ ಮತ್ತು ರಾಮುನನ್ನು ಕಾರಿನಲ್ಲಿ ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾದರು. ಕಾರು ಡ್ರೈವಿಂಗ್‌ ಗೊತ್ತಿಲ್ಲದ ರಾಮು ಅಸಹಾಯಕನಾಗಿ ಅರ್ಪಿತಾ ಜತೆ ಕಾರಿನಲ್ಲೇ ಉಳಿದುಕೊಂಡ. ಅಲ್ಲಿಗೆ ತೆರಳಿದ ಪೊಲೀಸರು ಇಬ್ಬರನ್ನೂ ಗುರುವಾರ ರಾತ್ರಿಯೇ ಠಾಣೆಗೆ ಕರೆ ತಂದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next