Advertisement

ಪತಿ ಕೊಂದು ಕಥೆ ಕಟ್ಟಿದ್ದ ಪತ್ನಿ, ಪ್ರಿಯಕರ ಸೆರೆ

03:49 PM Jan 08, 2023 | Team Udayavani |

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತಿದ್ದ ಪತಿಯನ್ನು ಕೊಂದು ಕುಡಿದು ಮೃತಪಟ್ಟಿದ್ದಾನೆ ಎಂದು ಕಥೆಕಟ್ಟಿದ್ದಲ್ಲದೆ, ತಂದೆ ಕೊಲೆ ರಹಸ್ಯ ಬಾಯಿಬಿಡದಂತೆ ಮಕ್ಕಳಿಗೆ ಪ್ರಾಣ ಬೆದರಿಕೆ ಹಾಕಿದ್ದ ತಾಯಿ ಮತ್ತು ಆಕೆಯ ಪ್ರಿಯಕರ ನಂದಿನಿ ಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ನಂದಿನಿ ಲೇಔಟ್‌ನ ಸಂಜಯಗಾಂಧಿ ನಗರ ನಿವಾಸಿ ಅನಿತಾ(31) ಮತ್ತು ಉತ್ತರಹಳ್ಳಿಯ ರಾಕೇಶ್‌(26) ಬಂಧಿತರು.

ಆರೋಪಿಗಳು 2022ರ ಜೂನ್‌ 18ರಂದು ಆಂಜನೇಯ (37) ಎಂಬಾತನನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು. ಸಂಜಯಗಾಂಧಿನಗರ ನಿವಾಸಿ ಆಂಜನೇಯ ಮತ್ತು ಪತ್ನಿ ಅನಿತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಂಜನೇಯ ಟೈಲ್ಸ್‌ ಕೆಲಸ ಮಾಡು ತ್ತಿದ್ದು, ಜತೆಗೆ ವಿಪರೀತ ಮದ್ಯ ವ್ಯಸನಿಯಾಗಿದ್ದ. ಅನಿತಾ ಗಾರ್ಮೆಂಟ್ಸ್‌ ಉದ್ಯೋಗಿಯಾಗಿದ್ದಳು. ಕ್ಯಾಂಟೀನ್‌ನಲ್ಲಿ ರಾಕೇಶ್‌ ಕೆಲಸ ಮಾಡುತ್ತಿದ್ದ. ನಿತ್ಯ ಕುಡಿದು ಮನೆಗೆ ಬರುತ್ತಿದ್ದ ಆಂಜನೇಯ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ಮಧ್ಯೆ ಉತ್ತರಹಳ್ಳಿಯಲ್ಲಿರುವ ತನ್ನ ಸಹೋದರಿ ಮನೆಗೆ ಹೋದಾಗ ರಾಕೇಶ್‌ ಪರಿಚಯವಾಗಿದ್ದು, ನಾಲ್ಕೈದು ವರ್ಷಗಳಿಂದ ರಾಕೇಶ್‌ ಜತೆ ಅನಿತಾ ಅಕ್ರಮ ಹೊಂದಿದ್ದರು. ಈ ವಿಚಾರ ತಿಳಿದ ಆಂಜನೇಯ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಉಸಿರುಗಟ್ಟಿಸಿ ಕೊಲೆ, ಕುಡಿದು ಸಾವು ಕಥೆ: ಜೂನ್‌ 18ರಂದು ಮದ್ಯ ಕುಡಿದು ಮನೆಗೆ ಬಂದಿದ್ದ ಆಂಜನೇಯ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ಅನಿತಾ, ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾಳೆ. ಬಳಿಕ ಇಬ್ಬರು ಸೇರಿ ತಡರಾತ್ರಿ ಮಲಗುವ ದಿಬ್ಬಿನಿಂದ ಪತಿಯನ್ನು ಉಸಿರುಗಟ್ಟಿಸಿ ಕೊಲೆಗೈದಿ ದ್ದಾರೆ. ಬಳಿಕ ಮೃತದೇಹದ ಜತೆಗೆ ರಾತ್ರಿಯಿಡಿ ಕಳೆದ ಅನಿತಾ ಮರು ದಿನ ತನ್ನ ಸಂಬಂಧಿಕರಿಗೆ ಕರೆ ಮಾಡಿ ಆಂಜನೇಯ ಕುಡಿದು ಮೃತಪಟ್ಟಿದ್ದಾನೆ ಎಂದು ವಿಚಾರ ತಿಳಿಸಿದ್ದಳು. ಆತ ಕೂಡ ಅದೇ ರೀತಿ ವರ್ತಿಸುತ್ತಿದ್ದ ಎಂದು ನಂಬಿದ ಸಂಬಂಧಿಕರು ಅಂತ್ಯಕ್ರಿಯೆ ಮುಗಿಸಿದ್ದರು.

ಪ್ರಿಯಕರನೊಂದಿಗೆ ಪರಾರಿ: ಈ ವಿಚಾರವನ್ನು ಇಬ್ಬರು ಹೆಣ್ಣು ಮಕ್ಕಳು ನೋಡಿದ್ದರು. ಆದರೆ, ಇಬ್ಬರು ಮಕ್ಕಳನ್ನು ಪತಿಯ ಬಗ್ಗೆ ಕೆಲವೊಂದು ವಿಚಾರದಲ್ಲಿ ಸುಳ್ಳು ಹೇಳಿ, ಯಾರಿಗೂ ಹೇಳದಂತೆ ಸುಮ್ಮನಿಸಿದ್ದಳು. ಕೆಲವೊಮ್ಮೆ ಮಕ್ಕಳು ಈ ವಿಚಾರ ಪ್ರಸ್ತಾಪಿಸಿದರೆ ಕೊಲೆಗೈಯ್ಯುವುದಾಗಿ ಚಾಕು ತೋರಿಸಿ ಬೆದರಿಕೆ ಹಾಕುತ್ತಿದ್ದಳು. ಮೂರು ತಿಂಗಳ ಹಿಂದೆ ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಹೆಗ್ಗನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿ ದ್ದರು. ಇಬ್ಬರು ಹೆಣ್ಣು ಮಕ್ಕಳು ಮೈಸೂರಿನ ಒಡ ನಾಡಿ ಸಂಸ್ಥೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ಈ ಮಧ್ಯೆ ಅಜ್ಜಿ ಬಳಿ ತಂದೆಯನ್ನು ತಾಯಿಯೆ ಕೊಲೆಗೈದಿದ್ದಾಳೆ ಎಂದು ಹೇಳಿದ್ದರು. ಈ ಸಂಬಂಧ ಜ.4 ನಂದಿನಿಲೇಔಟ್‌ ಠಾಣೆಯಲ್ಲಿ ತಾಯಿ ವಿರುದ್ಧ ಮಕ್ಕಳು ಕೊಲೆ ಪ್ರಕರಣ ದಾಖಲಿ ಸಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿ ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next