Advertisement

ಆಕಸ್ಮಿಕ ಬೆಂಕಿ: ಮೂವರ ಸಜೀವ ದಹನ

06:55 AM Dec 28, 2017 | Harsha Rao |

ಬೆಂಗಳೂರು/ಕೆ.ಆರ್‌.ಪುರ: ಆಕಸ್ಮಿಕ ಬೆಂಕಿ ತಗುಲಿ ಆರು ವರ್ಷದ ಹೆಣ್ಣು ಮಗು ಸೇರಿ ದಂಪತಿ ಸಜೀವ ದಹನವಾಗಿರುವ ಘೋರ ದುರಂತ ಮಹದೇವುಪರದ ಉದಯನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಆದರೆ, ಘಟನೆಗೆ ಸೊಳ್ಳೆ ಬತ್ತಿ
ಮತ್ತು ಮೇಣದ ಬತ್ತಿ ಹಚ್ಚಿದ್ದು ಕಾರಣವೋ ಅಥವಾ ಶಾರ್ಟ್‌ ಸರ್ಕಿಟ್‌ನಿಂದ ಘಟನೆ ಸಂಭವಿಸಿದಯೇ ಎಂಬ ಬಗ್ಗೆ ಇನ್ನು
ಖಚಿತವಾಗಿಲ್ಲ. ಸಂತೋಷ್‌ (ಮುರಗನ್‌) (35), ಸೋμಯಾ (30) ಹಾಗೂ ಫ್ಲೋರಾ (6) ಮೃತರು. ಮಂಗಳವಾರ ರಾತ್ರಿ
ದಂಪತಿ ಮಲಗುವ ಮೊದಲು ಸೊಳ್ಳೆ ಬತ್ತಿ ಹಾಗೂ ಮೇಣದ ಬತ್ತಿ ಹಚ್ಚಿದ್ದು, ತಲೆ ದಿಂಬಿನ ಪಕ್ಕ ಇರಿಸಿಕೊಂಡಿದ್ದರು
ಎನ್ನಲಾಗಿದೆ. ಈ ವೇಳೆ ತಡರಾತ್ರಿ ದಿಂಬಿಗೆ ಬೆಂಕಿಯ ಕಿಡಿ ತಗುಲಿ, ನಂತರ ಬೆಂಕಿಯ ಕೆನ್ನಾಲಗೆ ಇಡೀ ಮನೆ ಆವರಿಸಿದ್ದು, ಮನೆ ತುಂಬ ದಟ್ಟ ಹೊಗೆ ತುಂಬಿಕೊಂಡಿದೆ. ಗಾಢ ನಿದ್ರೆಯಲ್ಲಿದ್ದ ದಂಪತಿಗೆ ಕೆಲ ಸಮಯದ ನಂತರ ಎಚ್ಚರವಾಗಿದ್ದು, ಮನೆಯಿಂದ ಹೊರಬರಲಾಗದೆ ಬೆಂಕಿಗೆ ಸಿಲುಕಿ ಸುಟ್ಟು ಕರಕಲಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next