Advertisement

ಕಾರಿಗೆ ಆಕಸ್ಮಿಕ ಬೆಂಕಿ: ಚಾಲಕ ಅಪಾಯದಿಂದ ಪಾರು 

11:32 AM Dec 22, 2017 | Team Udayavani |

ಮಂಗಳೂರು: ನಗರದ ಬೆಸೆಂಟ್‌ ಜಂಕ್ಷನ್‌ ಬಳಿ ಗುರುವಾರ ಮಧ್ಯಾಹ್ನ ಸ್ಯಾಂಟ್ರೊ ಕಾರೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಭಾಗಶಃ ಸುಟ್ಟು ಹೋಗಿದ್ದು, ಕಾರಿನ ಚಾಲಕ ರಘುರಾಮ್‌ ಅಪಾಯದಿಂದ ಪಾರಾಗಿದ್ದಾರೆ. 

Advertisement

ಇದು ಬೆಂಗಳೂರಿನಲ್ಲಿರುವ ಉಲ್ಲಾಸ್‌ ಕಾರಂತ (ಡಾ| ಶಿವರಾಮ ಕಾರಂತರ ಪುತ್ರ) ಅವರ ಮಾಲಕತ್ವದ ಕಾರು ಆಗಿದ್ದು, ಉಲ್ಲಾಸ್‌ ಕಾರಂತ ಅವರು ಮಂಗಳೂರಿಗೆ ಬಂದಾಗಲೆಲ್ಲ  ಓಡಾಟಕ್ಕೆ ಈ ಕಾರನ್ನು ಉಪಯೋಗಿಸುತ್ತಿದ್ದರು. ರಘುರಾಮ್‌ ಅವರು ಕಾರಂತರ ಮನೆತನಕ್ಕೆ ಸೇರಿದವರಾಗಿದ್ದು, ಮಂಗಳೂರಿನ ಬೆಸೆಂಟ್‌ ಕಾಲೇಜು ಸಮೀಪ ಪಿ.ವಿ.ಎಸ್‌. ಕಲಾಕುಂಜ ರಸ್ತೆಯಲ್ಲಿ ಅವರ ಮನೆ ಇದೆ. 

ಗುರುವಾರ  ಮಧ್ಯಾಹ್ನ   ರಘುರಾಮ್‌ ಮನೆಯಿಂದ ಹೊರಟು  ಕಾರನ್ನು   ಚಲಾಯಿಸಿ ಕೊಂಡು 200 ಮೀ. ಕ್ರಮಿ ಸುವಷ್ಟರಲ್ಲಿ ಮುಂಭಾಗದ ಬೋನೆಟ್‌ನಲ್ಲಿ ಹೊಗೆ ಯಾಡುತ್ತಿರುವುದು ಕಂಡು ಬಂತು. ಕೂಡಲೇ ಕಾರು ನಿಲ್ಲಿಸಿ ಅವರು ಕೆಳಗೆ ಇಳಿದಿದ್ದು, ಬಳಿಕ ಸಮೀಪದಲ್ಲಿದ್ದ ಆಟೋ ರಿಕ್ಷಾ ಚಾಲಕರ ಸಹಾಯದಿಂದ ನೀರು ಚಿಮುಕಿಲಾಯಿತು. ಬೆಂಕಿ ಶಮನವಾಗದೆ ಇದ್ದಾಗ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು. ಪಾಂಡೇಶ್ವರದ  ಅಗ್ನಿ ಶಾಮಕ ಠಾಣೆಯ ಅಧಿಕಾರಿ  ಮತ್ತು ಸಿಬಂದಿ ಆಗಮಿಸಿ ಬೆಂಕಿಯನ್ನು ಆರಿಸಿದರು. ಬ್ಯಾಟರಿಯಲ್ಲಿ ಶಾರ್ಟ್‌ ಸಕೀìಟ್‌ ನಿಂದಾಗಿ ಘಟನೆ ಸಂಭವಿಸಿದೆ.. 

ಸುಮಾರು 1 ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ರಘುರಾಮ್‌ ಅವರು ತಿಳಿಸಿದ್ದಾರೆ. ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next