Advertisement

ಪಿಂಡ ಪ್ರದಾನಕ್ಕೆ ತೆರಳಿದ್ದಾಗ ಅವಘಡ: ಕೆರೆಗೆ ಬಿದ್ದು ವೃದ್ಧ ಸಾವು

12:15 AM Jul 20, 2023 | Team Udayavani |

ಕೋಟ: ತಾಯಿಯ ಪಿಂಡ ಪ್ರದಾನಗೈಯಲು ತೆರಳಿದ ವೃದ್ಧ ಪುತ್ರ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಜು. 18ರಂದು ಸಾಸ್ತಾನ ಸಮೀಪ ಐರೋಡಿ ದಂಡೆಬೆಟ್ಟುವಿನಲ್ಲಿ ಸಂಭವಿಸಿದೆ.
ಸ್ಥಳೀಯ ನಿವಾಸಿ ಗಣೇಶ್‌ ಅಧಿಕಾರಿ (76 ) ಮೃತ ವ್ಯಕ್ತಿ.

Advertisement

ಇವರು ತನ್ನ ತಾಯಿಯ ಶ್ರಾದ್ಧ ಕಾರ್ಯಕ್ರಮ ಮುಗಿಸಿ ಸಂಪ್ರದಾಯದಂತೆ ಸಂಜೆ ಪಿಂಡ ಬಿಡಲು ಮನೆ ಬಳಿಯ ಕೆರೆಗೆ ಹೋಗಿದ್ದು ಅರ್ಧ ಗಂಟೆ ಕಳೆದರೂ ವಾಪಸ್‌ ಬರಲಿಲ್ಲ. ಇದರಿಂದ ಅನುಮಾನಗೊಂಡ ಅವರ ಸುಬ್ರಹ್ಮಣ್ಯ ಅಧಿಕಾರಿ ಅವರು ಕರೆಯ ಬಳಿ ಹೋಗಿ ನೋಡಿದಾಗ ಗಣೇಶ್‌ ಅಧಿಕಾರಿಯವರ ಮೃತದೇಹ ಕೆರೆಯ ನೀರಿನಲ್ಲಿ ತೇಲುವ ಸ್ಥಿತಿಯಲ್ಲಿ ಕಂಡು ಬಂದಿತ್ತು.
ಇವರು ಪಿಂಡವನ್ನು ಕೆರೆಗೆ ಹಾಕಲು ಹೋದಾಗ, ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಭಾವಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next