Advertisement

ಅಪಘಾತ:ಗಾಯಗೊಂಡಿದ್ದ ಜಿಂಕೆಯ ನೆರವಿಗೆ ಧಾವಿಸಿದ ಸಚಿವ ಸಾ.ರಾ.ಮಹೇಶ್‌

04:25 PM Aug 03, 2018 | Team Udayavani |

ಮಡಿಕೇರಿ : ವಾಹನವೊಂದು ಢಿಕ್ಕಿಯಾದ ಪರಿಣಾಮ ಕಾಲಿಗೆ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಜಿಂಕೆಯ ನೆರವಿಗೆ ಸಚಿವ ಸಾ.ರಾ.ಮಹೇಶ್‌ ಅವರು ಆಗಮಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. 

Advertisement

ಶುಕ್ರವಾರ ಘಟನೆ ನಡೆದಿದ್ದು  ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಹೇಶ್‌ ಅವರು ತೆರಳುತ್ತಿದ್ದ ಮಾರ್ಗದಲ್ಲಿ ಅಪಘಾತವಾಗಿ ಜಿಂಕೆ ಬಿದ್ದಿತ್ತು. ಬಳಲಿದ್ದ ಜಿಂಕೆಗೆ ಸಚಿವರು ನೀರನ್ನೂ ಕುಡಿಸಿದರು. 

ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿ ರಕ್ಷಣೆ ನೀಡುವಂತೆ ಸೂಚಿಸಿದರು.  ಈ ವೇಳೆ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರು ಸ್ಥಳದಲ್ಲಿದ್ದರು. 

ಅರಣ್ಯ ಇಲಾಖೆಯ ಸಿಬಂದಿಗಳು ಜಿಂಕೆಯನ್ನು ಆರೈಕೆ ಮಾಡುತ್ತಿದ್ದಾರೆ. 

ನಾಯಿ ಅಟ್ಟಿಸಿಕೊಂಡು ಬಂದಾಗ ಪ್ರಾಣಾಪಾಯದಿಂದ ರಸ್ತೆ ಮದ್ಯೆಯೇ ಓಡಿ ಬಂದ ಜಿಂಕೆಗೆ ತಮಿಳುನಾಡು ನೊಂದಣಿಯ ವಾಹನವೊಂದು ಢಿಕ್ಕಿಯಾಗಿತ್ತು ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next