Advertisement

Subrahmanya: ಅಪಘಾತದ ಗಾಯಾಳು ಯುವಕ ಸಾವು

12:29 AM Feb 02, 2024 | Team Udayavani |

ಸುಬ್ರಹ್ಮಣ್ಯ: ಕೆಲವು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆ ಫ‌ಲಿಸಿದೆ ಮೃತಪಟ್ಟ ಘಟನೆ ಜ. 31ರಂದು ಸಂಭವಿಸಿದೆ.

Advertisement

ಕೂತ್ಕೂಂಜ ಗ್ರಾಮದ ಕಲ್ಕ ನಿವಾಸಿ ಚಿದಾನಂದ (36) ಮೃತರು. ಮೃತರು ತಂದೆ, ತಾಯಿ, ಪತ್ನಿ, ಪುತ್ರನನ್ನು ಅಗಲಿದ್ದಾರೆ.

ಜ. 30ರಂದು ರಾತ್ರಿ ಕೊಲ್ಲಮೊಗ್ರುವಿನ ವಿಶ್ವನಾಥ ರೈ ಅವರು ಹರಿಹರ ಪಲ್ಲತ್ತಡ್ಕದ ಶೆಟ್ಟಿಯಡ್ಕದಲ್ಲಿ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನ ಅಪಘಾತವಾಗಿ ಬಿದ್ದಿದ್ದು, ಪಕ್ಕದಲ್ಲೇ ಕೂತ್ಕೂಂಜದ ಚಿದಾನಂದ ಅವರು ತೀವ್ರವಾಗಿ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಗಾಯಾಳು ಯುವಕನನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಗಾಯಾಳು ಅಲ್ಲಿ ಜ. 31ರಂದು ಚಿಕಿತ್ಸೆ ಫ‌ಲಕಾರಿಯಾಗದೆ ಮೃತರಾಗಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next