Advertisement

ಹುಬ್ಬಳ್ಳಿ: ಐರಾವತ ಬಸ್ – ಕಾರು ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು, ಐವರಿಗೆ ಗಾಯ

12:44 PM Apr 06, 2022 | Team Udayavani |

ಹುಬ್ಬಳ್ಳಿ: ಐರಾವತ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಕಾರು ಚಾಲಕ ಹಾಗೂ ಅವರ ತಾಯಿ ಸ್ಥಳದಲ್ಲೇ ಮೃತಪಟ್ಟು,ಐವರು ಗಾಯಗೊಂಡಿರುವ ಘಟನೆ  ತಾಲೂಕಿನ ಶಿರಗುಪ್ಪಿ ಬಳಿ ನಡೆದಿದೆ.

Advertisement

ಅಪಘಾತದಲ್ಲಿ ಮೃತಪಟ್ಟವರು ಗುಜರಾತ್ ಮೂಲದವರಾದ ಇಲ್ಲಿನ ಗೋಕುಲ ರಸ್ತೆ ಡಾಲರ್ಸ್ ಕಾಲೋನಿ ನಿವಾಸಿಗಳಾದ ದಾವಲಬಾಯಿ ಪಡಸಾಲ (38) ಮತ್ತು ಇವರ ತಾಯಿ ಶಾರದಾ ಬೆಹನ್ ಪಡಸಾಲ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ರಿದಮ ಪಟೋಲಿಯಾ, ರಮೇಶ ಪಡಸಾಲ, ನಿತಾಬೆಹನ್ ಕಿಶೋರಬಾಯಿ ಪಟೋಲಿಯಾ, ದಯಾ ಬೆಹನ್ ಪಡಸಾಲ, ದೃಷ್ಟಿ ಪಟೋಲಿಯಾ, ದೇಯ ಪಡಸಾಲ ಹಾಗೂ ದಕ್ಷ ಪಡಸಾಲ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಮರಕ್ಕೆ ಕಾರು ಢಿಕ್ಕಿ: ಮಹಿಳೆ ಸ್ಥಳದಲ್ಲೇ ಸಾವು, 6 ಮಂದಿಗೆ ಗಾಯ

Advertisement

ಹುಬ್ಬಳ್ಳಿಯಿಂದ ಹಂಪಿಗೆ ಮಹೀಂದ್ರಾ ವಾಹನದಲ್ಲಿ ಕುಟುಂಬ ಸಮೇತರಾಗಿ ಹೊರಟಿದ್ದಾಗ ಗದಗ ಕಡೆಯಿಂದ ಹುಬ್ಬಳ್ಳಿ ಕಡಗೆ ವೇಗವಾಗಿ ರಾಂಗ್ ಸೈಡ್ ನಲ್ಲಿ ಬರುತ್ತಿದ್ದ ಐರಾವತ ಬಸ್ ಢಿಕ್ಕಿ ಹೊಡೆದಿದ್ದರಿಂದ ಅವಘಡ ಸಂಭವಿಸಿದೆ.

ಗಾಯಾಳುಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಇನ್ಸ್ ಪೆಕ್ಟರ್ ರಮೇಶ ಗೋಕಾಕ ಮತ್ತು ಸಿಬ್ಬಂದಿ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next