Advertisement

ತ್ರಾಸಿ:ಬಸ್‌ಗಳು  ಮುಖಾಮುಖೀ ಢಿಕ್ಕಿ: ಹಲವರಿಗೆ ಗಾಯ

11:22 AM Sep 21, 2018 | |

ಉಪ್ಪುಂದ: ತ್ರಾಸಿ ರಾ. ಹೆದ್ದಾರಿ 66ರ ಬೀಚ್‌ ಬಳಿ ಎರಡು ಬಸ್ಸುಗಳು ಮುಖಾಮುಖೀ ಢಿಕ್ಕಿಯಾದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಮಂಗಳೂರಿನಿಂದ ಗುಲ್ಬರ್ಗಕ್ಕೆ ಹೋಗುತ್ತಿದ್ದ ಹಾಗೂ ಭಟ್ಕಳದಿಂದ ಕುಂದಾಪುರಕ್ಕೆ  ಬರುತ್ತಿದ್ದ ಎರಡು ಖಾಸಗಿ ಬಸ್ಸುಗಳು ತ್ರಾಸಿ ಕಡಲ ತೀರದ ಬಳಿ ಮುಖಾಮುಖೀ ಢಿಕ್ಕಿಯಾದ ಪರಿಣಾಮ ಚಾಲಕ ಸಹಿತ ಹಲವರು ಗಾಯಗೊಂಡಿದ್ದಾರೆ.

Advertisement

ಅಪಘಾತದಲ್ಲಿ ಒಂದು ಬಸ್ಸಿನ ನಿರ್ವಾಹಕನ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಇತರ 8 ಮಂದಿ  ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ 6 ಮಂದಿ ಗಾಯಾಳುಗಳನ್ನು ಕುಂದಾಪುರ ಹಾಗೂ ಇಬ್ಬರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಟ್ರಾಫಿಕ್‌ ಜಾಮ್‌
ಅಪಘಾತದಿಂದಾಗಿ ರಾ.ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಗಂಗೊಳ್ಳಿ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.  ಎರಡು ಬಸ್ಸುಗಳ ಮುಂಭಾಗ ಜಖಂಗೊಂಡಿದೆ. ಗಂಗೊಳ್ಳಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.   

Advertisement

Udayavani is now on Telegram. Click here to join our channel and stay updated with the latest news.

Next