Advertisement

ಕೋಟೇಶ್ವರ: ಹಾವು ತಂದಿಟ್ಟ ಸಾವು: ಬೈಕ್ ಸವಾರ ದುರ್ಮರಣ 

03:08 PM Sep 23, 2018 | Team Udayavani |

ಕುಂದಾಪುರ: ಕಾರು  ಹರಿದು ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಭಾನುವಾರ ಮಧ್ಯಾಹ್ನ ಕೋಟೇಶ್ವರ ಬಳಿಯ ಕಾಳಾವರದಲ್ಲಿ ನಡೆದಿದೆ. ಹಾಲಾಡಿ ನಿವಾಸಿ ಗಂಗಾಧರ (34) ಮೃತ ದುರ್ದೈವಿ. 

Advertisement

ಹಾಲಾಡಿ- ಕೋಟೇಶ್ವರ ರಸ್ತೆಯ ಕಾಳಾವರದಲ್ಲಿ ಮಾರ್ಗ ಮಧ್ಯೆ ಹಾವು ಬಂತೆಂದು ಕಾರು ಚಾಲಕ ದಿಢೀರನೆ ಬ್ರೇಕ್  ಹಾಕಿದಾಗ ಹಿಂದಿನಿಂದ ಬರುತ್ತಿದ್ದ ಗಂಗಾಧರ ಬೈಕ್ ಕಾರಿಗೆ ಡಿಕ್ಕಿ ಹೊಡೆಯಿತು. ಇದೇ ಸಂದರ್ಭದಲ್ಲಿ ಅವರ ಹಿಂದಿನಿಂದ ಬಂದ ಮತ್ತೊಂದು ಕಾರು ಗಂಗಾಧರ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟರು ಎನ್ನಲಾಗಿದೆ. 

ಮೃತ ಗಂಗಾಧರ ಅವರು ಹಾಲಾಡಿಯಲ್ಲಿ ಗ್ಯಾರೇಜ್ ಮಾಲಕ ರುದ್ರ ಆಚಾರ ಅವರ ಮಗನಾಗಿದ್ದು, ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next