Advertisement

ಗೋಕರ್ಣದಲ್ಲಿ ಅಪಘಾತ: ಉಡುಪಿಯ ಇಬ್ಬರು ವಿದ್ಯಾರ್ಥಿಗಳು ದಾರುಣ ಸಾವು

10:36 AM Jun 10, 2019 | Team Udayavani |

ಉಡುಪಿ: ಕುಮಟಾ ತಾಲೂಕಿನ ಗೋಕರ್ಣ ಸಮೀಪದ ಮೊರಬ ಗ್ರಾಮದ ಬಳಿ ರಸ್ತೆ ಅಪಘಾತಕ್ಕೀಡಾಗಿ ಮಾಹೆಯ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಜೂ.8ರಂದು ರಾತ್ರಿ ನಡೆದಿದೆ.

Advertisement

ಅಂಬಲಪಾಡಿಯ ಶಯನ್‌ ಶೆಟ್ಟಿ (19) ಹಾಗೂ ಬ್ರಹ್ಮಗಿರಿಯ ಆರ್ಥಿಕ್‌ ಸಾಲ್ಯಾನ್‌ (19) ಮೃತಪಟ್ಟವರು. ಶಯನ್‌ ಶೆಟ್ಟಿ ಮುಂಬಯಿಯ ಹೊಟೇಲ್‌ ಉದ್ಯಮಿ ಸತೀಶ್‌ ಶೆಟ್ಟಿ ಮತ್ತು ಶಾಲಿನಿ ಶೆಟ್ಟಿ ದಂಪತಿಯ ಪುತ್ರ . ಆರ್ಥಿಕ್‌ ಅವರು ರೇಖಾ ಸಾಗರಿಕ ಅವರ ಪುತ್ರನಾಗಿದ್ದರು.

ಘಟನೆ ವಿವರ
ವಿದ್ಯಾರ್ಥಿಗಳಾಗಿದ್ದ ನಾಲ್ವರು ಗೆಳೆಯರು ಎರಡು ಬೈಕ್‌ಗಳಲ್ಲಿ ಮಣಿಪಾಲ ದಿಂದ ಗೋವಾಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಅಂಕೋಲದಿಂದ ಮಂಗಳೂರಿಗೆ ಬರುತ್ತಿದ್ದ ಟ್ರಕ್‌ ಬೇರೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಬೈಕಿಗೆ ಢಿಕ್ಕಿ ಹೊಡೆಯಿತು. ಪರಿಣಾಮ ಈ ಬೈಕಿನಲ್ಲಿದ್ದ ಶಯನ್‌ ಶೆಟ್ಟಿ ಮತ್ತು ಆರ್ಥಿಕ ಪೂಜಾರಿ ಸ್ಥಳದಲ್ಲೇ ಕೊನೆಯುಸಿರೆಳೆದರು. ಮತ್ತೂಂದು ಬೈಕಿನಲ್ಲಿದ್ದ ಉಡುಪಿಯ ಅಭಿಷೇಕ್‌ ಮತ್ತು ಕಲ್ಮಾಡಿಯ ಪವನ್‌ ಕುಮಾರ್‌ ಅವರಿದ್ದರು.

ಅಪಘಾತದ ತೀವ್ರತೆಗೆ ಬೈಕ್‌ 3 ಪಲ್ಟಿ ಹೊಡೆದಿತ್ತು ಹಾಗೂ ಬೈಕ್‌ ಸವಾರರು ಕೂಡ ಅತಿವೇಗದಿಂದ ಸಂಚರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಚಾಲಕ ಮಹಾರಾಷ್ಟ್ರದ ರಾಜೇಸಾಬ ಶರಣಾಗಿದ್ದಾನೆ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲಕ್ಕೆಂದು ಹೇಳಿ ಹೋಗಿದ್ದರು !
ವಿದ್ಯಾರ್ಥಿಗಳು ಗೋವಾಕ್ಕೆ ಹೊರಟಿದ್ದ ವಿಷಯ ಮನೆಯಲ್ಲಿ ತಿಳಿದಿರಲಿಲ್ಲ ಹಾಗೂ ಅವರು ಮಣಿಪಾಲಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next