Advertisement

ಬೆಂಗಳೂರು : ಡಿವೈಡರ್‌ ಹಾರಿದ ಸರ್ಕಾರಿ ಬಸ್‌, ಓರ್ವ ಬಲಿ, ಮೂವರು ಗಂಭೀರ

09:26 AM May 26, 2019 | Team Udayavani |

ಬೆಂಗಳೂರು : ಶನಿವಾರ ನಸುಕಿನ 3.30 ರ ವೇಳೆಗೆ ನವರಂಗ್‌ ಸರ್ಕಲ್‌ ಬಳಿ ಸರ್ಕಾರಿ ಬಸ್ಸೊಂದು ಡಿವೈಡರ್‌ ಹಾರಿ ಕಾರಿಗೆ ಗುದ್ದಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮಗು ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಲಗ್ಗೆರೆ ಮೂಲದ ರವಿ ಎನ್ನುವವರು ಸಾವನ್ನಪ್ಪಿದ ದುರ್ದೈವಿ.ಅನಾರೋಗ್ಯಕ್ಕೀಡಾದ ನೆರೆ ಮನೆಯ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಸ್ನೇಹಿತನ ಕಾರಿನಲ್ಲಿ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಅನಾರೋಗ್ಯಕ್ಕೀಡಾದ ಮಗು ಸೇರಿ ಮೂವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಲ್ಲೇಶ್ವರಂ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ. ಬಸ್‌ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next