Advertisement

ಕಾರು-ಲಾರಿ ಢಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

01:43 PM Mar 11, 2023 | Team Udayavani |

ಹೊಸಕೋಟೆ: ಕಾರು ಹಾಗೂ ಲಾರಿ ಮುಖಾಮುಖೀ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರೂ ಮೃತಪಟ್ಟಿದ್ದಾರೆ.

Advertisement

ಹೊಸಕೋಟೆ ತಾಲೂಕು ರಾಷ್ಟ್ರೀಯ ಹೆದ್ದಾರಿ 75ರ ಗೋಟ್ಟಿಪುರ ಅಟ್ಟೂರಿ ಮಧ್ಯೆ ಈ ಘಟನೆ ನಡೆದಿದ್ದು, ಹೊಸಕೋಟೆ ತಾಲೂಕಿನ ನಿಡಘಟ್ಟ ಗ್ರಾಮದ ಸುಧಾಕರ್‌ (19) ಹಾಗೂ ದಾಸರಹಳ್ಳಿ ಮೋಹನ್‌ (21) ಮೃತ ದುರ್ದೈವಿಗಳು.

ಬೆಂಗಳೂರು ಕಡೆಯಿಂದ ಕೋಲಾರದ ಕಡೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮತ್ತೂಂದು ಭಾಗದಲ್ಲಿ ಚಲ್ಲಿಸುತ್ತಿದ್ದ ಲಾರಿಗೆ ಮುಖಾಮುಖೀ ಢಕ್ಕಿಯಾಗಿದೆ. ಈ ವೇಳೆ ಲಾರಿಗೆ ಕಾರು ಸಿಲುಕಿ ಸುಮಾರು ದೂರ ಎಳೆದೊಯ್ದಿದೆ.

ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತದೇಹಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಸ್ಥಳಕ್ಕೆ ಎಸ್‌ಪಿ ಭೇಟಿ ನೀಡಿದ್ದು, ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next