Advertisement
ಡಾ| ಲಕ್ಷ್ಮಣ್ದಾಸ್ 1969ರಿಂದ ಸಂಕೀರ್ತನೆಯಲ್ಲಿ ತೊಡಗಿರುವ ಇವರು ವಿದೇಶಕ್ಕೂ ಕೀರ್ತನೆಯನ್ನು ಒಯ್ದ ಹಿರಿಮೆ ಹೊಂದಿದ್ದಾರೆ. ಆರ್. ಗುರುರಾಜುಲು ನಾಯ್ಡು ಇವರ ಗುರು. ಸಮಾನತೆಯ ಹರಿಕಾರರಾದ ಬುದ್ಧ, ಬಸವಣ್ಣ, ಮಹಾಕವಿ ಪಂಪ, ಗಾನ ಯೋಗಿ ಪುಟ್ಟರಾಜ ಗವಾಯಿ, ನಾಟಕರತ್ನ ಗುಬ್ಬಿ ವೀರಣ್ಣ ಮುಂತಾದವರ ಸಹಿತ ಇನ್ನು ಹಲವಾರು ಮಹಾಪುರುಷರ ಜೀವನವನ್ನು ಕಥಾ ಕೀರ್ತನವನ್ನಾಗಿಸಿ ಕೀರ್ತನಾ ರಂಗದಲ್ಲಿ ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಿದ್ದಾರೆ. ಆಕಾಶವಾಣಿ/ದೂರದರ್ಶನ ಸರಕಾರದ ಮಾಧ್ಯಮದಲ್ಲಿ ಇವರು ಆಪ್ಯಾಯ ಮಾನ್ಯರು. ರಂಗಭೂಮಿ /ಬರವಣಿಗೆಯಲ್ಲೂ ಸಾಧನೆ ಕಮ್ಮಿಯಿಲ್ಲ.
ಪ್ರಸ್ತುತ ತಿರುಪತಿಯ ಶ್ರೀ ವೆಂಕಟೇಶ್ವರ ಕಾಲೇಜಿನ ಸಂಗೀತ/ನೃತ್ಯ ವಿಭಾಗದ ಮುಖ್ಯಸ್ಥರಾಗಿರುವ ಎಂ.ವಿ. ಸಿಂಹಾಚಲ ಶಾಸ್ತ್ರಿಯವರ ಗುರು ದಿ| ಕರೂರು ಕೃಷ್ಣ ದಾಸ್. ಶ್ರೀ ರಾಮಾಯಣ ಕೀರ್ತನೆಗೆ ಪ್ರಖ್ಯಾತರಾಗಿರುವ ಇವರು ಕಥಾ ಕೀರ್ತನೆಯನ್ನು ಜನಕಥಾ ಕೀರ್ತನವನ್ನಾಗಿಸಿದ ಕೀರ್ತನಾ ಶಿರೋಮಣಿ. “ಹರಿಕಥಾ ಸುಧಾನಿಧಿ’, “ಹರಿ ಕಥಾ ಚೂಡಾವಣಿ’, “ಶ್ರೀರಾಮ ಕಥಾ ಸುಧಾನಿಧಿ’, ಸೇರಿದಂತೆ ಹಲವಾರು ಬಿರುದುಗಳು, ಸಂಗೀತ ನಾಟಕ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ, ಆಂಧ್ರ ಸರ್ಕಾರದ ಯುಗಾದಿ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ. ಸಂದೀಪ್ ನಾಯಕ್ ಸುಜೀರ್