Advertisement

ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕನ ಮನೆ ಮೇಲೆ ಎಸಿಬಿ ದಾಳಿ

12:42 PM Jun 16, 2020 | keerthan |

ಕಲಬುರಗಿ: ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ ಮುಗುಟ ಮನೆ ಮೇಲೆ ಮಂಗಳವಾರ ಬೆಳಿಗ್ಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ನಡೆಸಿದ್ದಾರೆ. ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.

Advertisement

ಜಗದೇವಪ್ಪ ಅವರ ಕಲಬುರರ್ಗ ನಗರದ ಪೂಜಾ ಕಾಲೊನಿಯಲ್ಲಿರುವ ಮನೆ , ವಾಣಿಜ್ಯ ಸಂಕೀರ್ಣ, ಯಾದಗಿರಿಯ ಕಚೇರಿ , ಬೀದರ್ ಮನೆ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಎಸಿಬಿ ಡಿವೈಎಸ್ಪಿ ಗಳ ನೇತೃತ್ವದಲ್ಲಿ ದಾಳಿ ನಡೆದಿದೆ.

ಯಾದಗಿರಿ ಎಸಿಬಿ ಡಿವೈಎಸ್ಪಿ ಗುರುನಾಥ ಮತ್ತೂರ, ಕಲಬುರ್ಗಿ ಡಿವೈಎಸ್ಪಿ ಸುಧಾ ಆದಿ, ಬೀದರ್ ಡಿವೈಎಸ್ಪಿ ಬಷಿರೋದ್ದೀನ್ ಪಟೇಲ್, ಇನ್ಸ್ಪೆಕ್ಟರ್ ಗಳಾದ ಜಿ.ಎಸ್.ಬಿರಾದಾರ, ಶರಣಬಸಪ್ಪ ಕೂಡ್ಲಾ ದಾಳಿ ನೇತೃತ್ವ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next