Advertisement

ಶಿವಮೊಗ್ಗ: ಎಸಿಬಿ ದಾಳಿ, ಎರಡ್ಮೂರು ತಿಂಗಳಿನಿಂದ ಬಾಕಿ ಉಳಿದ ಅರ್ಜಿಗಳೆಲ್ಲ ವಿಲೇವಾರಿ

08:08 PM Jun 04, 2022 | Team Udayavani |

ಶಿವಮೊಗ್ಗ: ಒಂದು ಎಸಿಬಿ ದಾಳಿ ಎರಡ್ಮೂರು ತಿಂಗಳಿನಿಂದ ಬಾಕಿ ಉಳಿದಿದ್ದ ಅರ್ಜಿಗಳನ್ನೆಲ್ಲ ವಿಲೇವಾರಿ ಮಾಡಿಸಿದೆ. ಇಂತದ್ದೊಂದು ಘಟನೆ ಶಿವಮೊಗ್ಗದ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಕಾಯಿದೆ ಕಚೇರಿಯಲ್ಲಿ ನಡೆದಿದೆ.

Advertisement

ದಿನಸಿ ಅಂಗಡಿ ನೋಂದಣಿಗೆ ವ್ಯಕ್ತಿಯೊಬ್ಬರು ಅರ್ಜಿ ಹಾಕಿದ್ದರು. ಅರ್ಜಿ ವಿಲೇವಾರಿಗೆ ಅಲ್ಲಿನ ಎಫ್‌ಡಿಎ 2ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 1 ಸಾವಿರ ಕೊಡುವಾಗ ಜೂನ್1ರಂದು ರೆಡ್‌ಹ್ಯಾಂಡ್ ಆಗಿ ಆರೋಪಿಯನ್ನು ಬಂಧಿಸಲಾಯಿತು. ನಂತರ ಅಧಿಕಾರಿ, ನೌಕರರಿಗೆ ಎಚ್ಚರಿಕೆ ನೀಡಲಾಗಿತ್ತು.

ಇದರ ಪರಿಣಾಮ ಮೂರು ದಿನದಲ್ಲಿ ಶಿವಮೊಗ್ಗ ತಾಲ್ಲೂಕು ಕಚೇರಿಯ 196 ಹಾಗೂ ಜಿಲ್ಲಾ ಕಚೇರಿಯ 93 ಅರ್ಜಿಗಳು ಸೇರಿ 289 ಅರ್ಜಿಗಳು ವಿಲೇವಾರಿಯಾಗಿದ್ದು ಯಾವುದೇ ಅರ್ಜಿಗಳು ಬಾಕಿ ಇಲ್ಲ ಎಂದು ಅಧಿಕಾರಿಗಳು ಷರಾ ಬರೆದಿದ್ದಾರೆ.

ಇದನ್ನೂ ಓದಿ : ಗೋವಾದಲ್ಲಿ ಅಪರಾಧ ಪ್ರಕರಣಗಳ ಹೆಚ್ಚಳ ;ಬಿಗಿ ಕ್ರಮಕ್ಕೆ ಮುಂದಾದ ಸರಕಾರ

Advertisement

Udayavani is now on Telegram. Click here to join our channel and stay updated with the latest news.

Next