Advertisement

ಲೇಔಟ್ ನಿರ್ಮಿಸಲು ಹಣಕ್ಕೆ ಬೇಡಿಕೆ : ಎಸಿಬಿ ಬಲೆಗೆ ಬಿದ್ದ ಸಿಡಿಎ ಸಹಾಯಕ ಯೋಜನಾಧಿಕಾರಿ

08:15 PM Apr 08, 2022 | Team Udayavani |

ಚಿಕ್ಕಮಗಳೂರು : ಲೇಔಟ್ ನಿರ್ಮಿಸಲು ವ್ಯಕ್ತಿಯೊಬ್ಬರಿಂದ ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಸಿಡಿಎ ಸಹಾಯಕ ಯೋಜನಾಧಿಕಾರಿ ಎಂ.ಸಿ ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

Advertisement

ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ ಶಿವಕುಮಾರ್ ಲೇಔಟ್ ನಿರ್ಮಿಸಲು ಗೋಪಿನಾಥ್ ಎಂಬುವರಿಂದ
ಎಂಟೂವರೆ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ, ಮುಂಗಡ ಎರಡು ಲಕ್ಷ ಕೊಡುವಂತೆ ಶಿವಕುಮಾರ್ ಹೇಳಿದ್ದಾರೆ ಈ ಕುರಿತು ಗೋಪಿನಾಥ್ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು ಅದರಂತೆ ಶುಕ್ರವಾರ ಕಚೇರಿ ಪಕ್ಕದಲ್ಲಿಯೇ ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಇನ್ಸ್ ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದ ತಂಡ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ :ಮಾಜಿ ಸಂಸದ ಎಚ್.ಜಿ.ರಾಮುಲು ನಿವಾಸಕ್ಕೆ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಭೇಟಿ

Advertisement

Udayavani is now on Telegram. Click here to join our channel and stay updated with the latest news.

Next