Advertisement

ಎಸಿಬಿ ದಾಳಿ: 5.96 ಲಕ್ಷರೂ. ವಶ

12:27 PM Dec 12, 2020 | Suhan S |

ಬೆಂಗಳೂರು: ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಕೋರಮಂಗಲ ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಕಚೇರಿಯಲ್ಲಿ ಶುಕ್ರವಾರ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಲಕ್ಷಾಂತರರೂ. ಅನಧಿಕೃತ ಹಣ ಹಾಗೂ ಏಜೆಂಟರ ಕಚೇರಿಗಳಲ್ಲಿ ಆರ್‌ಟಿಒ ದಾಖಲೆಗಳನ್ನು ಜಪ್ತಿ ಮಾಡಿ ಅಕ್ರಮದಲ್ಲಿ ಭಾಗಿಯಾಗಿದ್ದ ಐವರು ಏಜಂಟರನ್ನು ಬಂಧಿಸಲಾಗಿದೆ.

Advertisement

ಏಜಂಟರಾದ ಸತೀಶ್‌ ಟಿ.ಎನ್‌, ಸೊಹೇಲ್‌, ಶೋಹೆಬ್‌ ಖಾನ್‌, ವಿನ್ನಿರಾಜ, ಕಾರ್ತಿಕ್‌ ಬಂಧಿತರು. ಆರ್‌ಟಿಒ ಕಚೇರಿಯಲ್ಲಿ ಚಾಲನ ಪರವಾನಗಿ, ಡಿಎಲ್‌, ಆರ್‌ಸಿ,ವರ್ಗಾವಣೆ ಪತ್ರ, ದಾಖಲೆಗಳಲ್ಲಿ ತಿದ್ದುಪಡಿ ಸೇರಿದಂತೆಸಾರಿಗೆ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ಏಜೆಂಟರ ಮೂಲಕ ಲಂಚಕ್ಕೆ ಬೇಡಿಕೆ ಇರಿಸಲಾಗುತ್ತದೆ. ಏಜೆಂಟರ ಮೂಲಕವೇ ಹೋದರೆ ಎಲ್ಲ ಕೆಲಸ ಮಾಡಿಕೊಡುವ ವಾತಾವರಣ ನಿರ್ಮಿಸಲಾಗಿದೆ. ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂಬ ದೂರುಗಳು ಎಸಿಬಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಾಯಂಕಾಲ ದಿಢೀರ್‌ ದಾಳಿ ನಡೆ ಸಿದ ಎಸಿಬಿ ಅಧಿಕಾರಿಗಳು ಹಲವು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದರು.

ಇದನ್ನೂ ಓದಿ : “ದ ಡರ್ಟಿ ಪಿಚ್ಚರ್” ನಟಿ ಆರ್ಯ ಬ್ಯಾನರ್ಜಿ ಕೋಲ್ಕತಾ ನಿವಾಸದಲ್ಲಿ ಶವವಾಗಿ ಪತ್ತೆ!

ಕಾರ್ಯಾಚರಣೆ ವೇಳೆ ರೆಕಾರ್ಡ್‌ ರೂಮಿನ ಕಪಾಟುಗಳಲ್ಲಿ ಅಕ್ರಮ ಹಣಬಚ್ಚಿಟ್ಟಿರುವುದು ಪತ್ತೆಯಾಗಿದೆ. ಆರ್‌ಟಿಒ ಕಚೇರಿ ಮತ್ತು ಏಜೆಂಟರ ಕಚೇರಿಗಳಲ್ಲಿ ಒಟ್ಟು 5.96 ಲಕ್ಷ ರೂ. ನಗದು ಮತ್ತು ಅಪಾರ ಪ್ರಮಾಣದ ಚಾಲನಾ ಪರವಾನಗಿ ಸೇರಿದಂತೆ ಸಾರಿಗೆ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕರ ಮೂಲ ಪ್ರತಿಗಳು ಪತ್ತೆಯಾಗಿವೆ ಎಂದು ಎಸಿಬಿ ಎಸ್ಪಿ ಕುಲದೀಪ್‌ ಜೈನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next