Advertisement

ಅಕ್ರಮ ಆಸ್ತಿ ಸಂಪದಾದನೆ ಆರ್‌ಡಬ್ಲುಎಸ್ ಎಇ ಮನೆ ಮೇಲೆ ಎಸಿಬಿ ದಾಳಿ

12:07 PM Nov 03, 2015 | sudhir |

ಬಾಗಲಕೋಟೆ : ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪದಾದನೆ ಆರೋಪದ ಮೇಲೆ ಇಲ್ಲಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ  ಇಲಾಖೆಯ ಬಾಗಲಕೋಟೆ ತಾಲೂಕು ವಿಭಾಗದ ಸಹಾಯಕ  ಅಭಿಯಂತರ ಎ.ಎಸ್.ತೋಪಲಕಟ್ಟಿ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದರು.

Advertisement

ಎಸಿಬಿ ಡಿವೈಎಸ್ಪಿ ಗಣಪತಿ ಗುಡಾಜಿ ನೇತೃತ್ವದಲ್ಲಿ ಇನ್ಸಪೆಕ್ಟರ್ ಸಮೀರ ಮುಲ್ಲಾ, ಧಾರವಾಡದ ಎಸಿಬಿ ಇನ್ಸಪೆಕ್ಟರ್ ಬಿ.ಎ. ಜಾಧವ ಸೇರಿ ಒಟ್ಟು 20 ಜನ ಅಧಿಕಾರಿ-ಸಿಬ್ಬಂದಿಗಳು, ಅಧಿಕಾರಿ ತೋಪಲಕಟ್ಟಿ ಅವರ ವಿದ್ಯಾಗಿರಿಯ 8ನೇ ಕ್ರಾಸ್‌ನ ಮನೆ,  17ನೇ ಕ್ರಾಸ್‌ನಲ್ಲಿರುವ ಗ್ಯಾಸ್ ಏಜನ್ಸಿಯ ಕಚೇರಿ  ಹಾಗೂ ಹಳೆಯ ಬಾಗಲಕೋಟೆಯಲ್ಲಿರುವ ಆರ್‌ಡಬ್ಲುಎಸ್ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದರು. ಬೆಳಗ್ಗೆಯೇ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಮುಂದುವರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next