Advertisement

ಕೇಮಾರು ಶ್ರೀಗಳ ನಿಂದನೆ: ದೂರು 

03:24 PM Aug 07, 2018 | Team Udayavani |

ಉಡುಪಿ: ಕೇಮಾರು ಶ್ರೀ ಈಶವಿಠಲದಾಸ ಶ್ರೀಪಾದರಿಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಹಾಗೂ ಬೆದರಿಕೆ ಒಡ್ಡಿರುವ ಕುರಿತು ಉಡುಪಿ ಸೆನ್‌ ಠಾಣೆಯಲ್ಲಿ ಸೋಮವಾರ ಶ್ರೀಗಳ ಶಿಷ್ಯನೋರ್ವ ದೂರು ನೀಡಿದ್ದಾರೆ.
ಕಾರ್ಕಳ ತಾಲೂಕಿನ ಕುರ್ಕಿಲ ಬೆಟ್ಟು ಬಾಳಿಕೆ ಪಡುಮನೆ ನಿವಾಸಿ ಆದರ್ಶ್‌ ಶೆಟ್ಟಿ (21) ಶ್ರೀಗಳ ಪರ ದೂರು ದಾಖಲಿಸಿದ್ದು, ಬೆದರಿಕೆ ಮತ್ತು ನಿಂದನೆ ನಡೆಸಿದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

Advertisement

ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಮಾರು ಶ್ರೀಗಳು ಉಡುಪಿ ಶೀರೂರು ಶ್ರೀಗಳು ಮೃತರಾದ ಸಂದರ್ಭ ನ್ಯಾಯಕ್ಕಾಗಿ ಧ್ವನಿಎತ್ತಿದ ಬಳಿಕ ಕೆಲ ಕಿಡಿಗೇಡಿಗಳು ಕೇಮಾರು ಶ್ರೀಗಳ ವಿರುದ್ಧ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ನಿಂದನಾತ್ಮಕ ಬರಹ, ಮಾನಹಾನಿ ಲೇಖನ ಬರೆದು ಪರೋಕ್ಷವಾಗಿ ಬೆದರಿಕೆ ಹಾಕುತ್ತಿದ್ದಾರೆ ಅವರ ವಿರುದ್ದ ಕ್ರಮ ಕೈಗೊಳ್ಳಲು ದೂರಿನಲ್ಲಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next