Advertisement

ವಾಟ್ಸಪ್‌ ಗ್ರೂಪ್‌ನಲ್ಲಿ ಅವಹೇಳನ: ಠಾಣೆಯಲ್ಲಿ  ಕ್ಷಮಾಪಣೆ ಪತ್ರ

09:12 AM Jun 28, 2018 | Harsha Rao |

ಹಳೆಯಂಗಡಿ: ಇಲ್ಲಿನ ವಾಟ್ಸಪ್‌ ಗ್ರೂಪ್‌ನಲ್ಲಿ ವಿಶ್ವಕರ್ಮ ಸಮಾಜಕ್ಕೆ ಅವಹೇಳನ ಮಾಡಿದ ಸಂದೇಶವೊಂದರ ವಿರುದ್ಧ ಉಡುಪಿ ವಿಶ್ವಕರ್ಮ ಒಕ್ಕೂಟವು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದರಿಂದ ಸಂದೇಶವನ್ನು ಕಳುಹಿಸಿದ ವ್ಯಕ್ತಿ ಠಾಣೆಗೆ ಹಾಜರಾಗಿ ಕ್ಷಮಾಪಣೆ ಪತ್ರವನ್ನು ನೀಡಿದ್ದಾರೆ.

Advertisement

ಪಡುಪಣಂಬೂರು ಬೆಳ್ಳಾಯರು ಗ್ರಾಮದ ಫಣಿರಾಜ್‌ ಜೈನ್‌ ಜೂ. 22ರಂದು ವಿಶ್ವಕರ್ಮ ಸಮಾಜವನ್ನು ನಿಂದಿಸಿ ಸಂದೇಶ ರವಾನಿಸಿದ್ದರು. 

ಇದರ ವಿರುದ್ಧ ಉಡುಪಿಯ ವಿಶ್ವಕರ್ಮ ಒಕ್ಕೂಟ ಸೈಬರ್‌ ಕ್ರೈಂಗೆ ದೂರು ನೀಡಿದ್ದರಿಂದ ಗ್ರೂಪ್‌ನ ಅಡ್ಮಿನ್‌ ಮೂಲಕ ಫಣಿರಾಜ್‌ 
ಜೈನ್‌ ಅವರನ್ನು ಜೂ. 27ರಂದು ಉಡುಪಿ ಠಾಣೆಗೆ ಕರೆಸಿ ಕ್ಷಮಾಪಣೆ ಪತ್ರ ಪಡೆದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next