Advertisement

Mangaluru ಶಟರ್‌ ಎಳೆದು ಹಾಕಿ ನಿಂದನೆ: ಕಟ್ಟಡದ ಮಾಲಕನ ವಿರುದ್ಧ ಪ್ರಕರಣ

12:40 AM Jan 20, 2024 | Team Udayavani |

ಮಂಗಳೂರು: ಕಟ್ಟಡವೊಂದರ ಶಟರ್‌ ಹಾಕಿ ಕಚೇರಿಯ ಸಿಬಂದಿಯನ್ನು ತಡೆದು ನಿಂದಿಸಿದ ಘಟನೆ ನಗರದ ಕಾಸಿಯಾ ಜಂಕ್ಷನ್‌ನಲ್ಲಿ ಸಂಭವಿಸಿದೆ.

Advertisement

ಮಹಮ್ಮದ್‌ ಸೌದ್‌ ಅವರು ಕಾಸಿಯಾ ಜಂಕ್ಷನ್‌ನ ಶಮಾ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಕಚೇರಿ ಹೊಂದಿದ್ದು, ಗುರುವಾರ ರಾತ್ರಿ 8.30ಕ್ಕೆ ಕಚೇರಿ ಕೆಲಸ ಮುಗಿಸಿ ಉದ್ಯೋಗಿಳಾದ ಕಾಜೋಲ್‌, ನಿಶಾಮ್‌, ಸವದ್‌ ಮತ್ತು ಸೌದ್‌ ಅವರು ಹೊರಗೆ ಬರುತ್ತಿದ್ದರು.

ಆಗ ಕಾಂಪ್ಲೆಕ್ಸ್‌ನ ಮಾಲಕ ಅಸ್ಲಾಮ್‌ ನೆಳ ಅಂತಸ್ತಿನ ಶಟರ್‌ ಬಾಗಿಲು ಹಾಕಿ ಅವರನ್ನು ತಡೆದು ನಿಂದಿಸಿದ್ದಾನೆ. ಈ ಬಗ್ಗೆ ಸಿಬಂದಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಶಟರ್‌ ತೆರೆದು ಉದ್ಯೋಗಿಗಳನ್ನು ಹೊರಗೆ ಕಳುಹಿಸಿದರು. ಮಹಮ್ಮದ್‌ ಸೌದ್‌ ನೀಡಿರುವ ದೂರಿನ ಆಧಾರದಲ್ಲಿ ಕಟ್ಟಡ ಮಾಲಕ ಅಸ್ಲಾಂ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next