Advertisement

ನಾಲ್ಕು ವರ್ಷಗಳ ಬಳಿಕ ತಲ್ವಾರ್‌ ದಂಪತಿ ಬಿಡುಗಡೆ

06:40 AM Oct 17, 2017 | Team Udayavani |

ಹೊಸದಿಲ್ಲಿ: ಆರುಷಿ-ಹೇಮರಾಜ್‌ ಕೊಲೆ ಪ್ರಕರಣದಲ್ಲಿ ಇತ್ತೀಚೆಗೆ ಖುಲಾಸೆಗೊಂಡ ಆರುಷಿ ಹೆತ್ತವರಾದ ರಾಜೇಶ್‌ ತಲ್ವಾರ್‌ ಹಾಗೂ ನೂಪುರ್‌ ತಲ್ವಾರ್‌ ಅವರು ಸೋಮವಾರ ಗಾಜಿಯಾಬಾದ್‌ನ ದಾಸ್ನಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Advertisement

4 ವರ್ಷಗಳ ಕಾಲ ಜೈಲಲ್ಲಿ ಕಳೆದ ದಂಪತಿ, ಸೋಮವಾರ ಸಂಜೆ ಬಿಡುಗಡೆಯಾಗಿ ಗ್ರೇಟರ್‌ ನೋಯ್ಡಾದಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ. ದಾರಿ ಮಧ್ಯೆ ಸಾಯಿ ದೇವಾಲಯ ಮತ್ತು ಗುರುದ್ವಾರಕ್ಕೆ ಹೋಗಿ ಪೂಜೆ ಸಲ್ಲಿಸಿದ ಅವರು, ನಂತರ ಜಲ ವಾಯುವಿಹಾರದಲ್ಲಿರುವ ನೂಪುರ್‌ ಅವರ ಹೆತ್ತವರ ನಿವಾಸಕ್ಕೆ ಹೋಗಿದ್ದಾರೆ. ಅದು ತಲ್ವಾರ್‌ ದಂಪತಿಯದ್ದೇ ಅಪಾರ್ಟ್‌ಮೆಂಟ್‌ ಆಗಿದ್ದು, ಆರುಷಿ ಹತ್ಯೆಯಾದ ಫ್ಲ್ಯಾಟ್‌ ಕೂಡ ಅದೇ ಅಪಾರ್ಟ್‌ಮೆಂಟ್‌ನಲ್ಲಿದೆ. ಇದೇ ವೇಳೆ ಮಾತನಾಡಿರುವ ತಲ್ವಾರ್‌ ದಂಪತಿ ಪರ ವಕೀಲ ತನ್ವೀರ್‌ ಅಹ್ಮದ್‌ ಮಿರ್‌, “ನನ್ನ ಕಕ್ಷಿದಾರರು ಶಾಂತಿಯಿಂದ ಬದುಕಬೇಕು ಎಂದು ನಾನು ಬಯಸುತ್ತೇನೆ. ಅವರ ಘನತೆ, ಗೌರವವನ್ನು ಕಾಪಾಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ’ ಎಂದು ಮಾಧ್ಯಮಗಳಿಗೆ ತಿಳಿಸಿದರು. 

ಈ ನಡುವೆ, 4 ವರ್ಷ ಕಾಲ ಕೈದಿಗಳಿಗೆ ದಂತ ಚಿಕಿತ್ಸೆ ನೀಡಿದ್ದ ದಂಪತಿ ತಮಗೆ ಬರಬೇಕಿದ್ದ 49,500 ರೂ. ಸಂಭಾವನೆಯನ್ನು ಪಡೆಯಲು ನಿರಾಕರಿಸಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next