Advertisement

ವೈರಲ್‌ ಆಯಿತು ಆರಾಧ್ಯಾ ಬಚ್ಚನ್‌ ಮಹಿಳಾ ಸಬಲೀಕರಣ ಮಾತು

10:32 AM Dec 22, 2019 | Sriram |

ಮುಂಬೈ: ಮಹಿಳೆಯರ ಸಬಲೀಕರಣದ ಬಗ್ಗೆ ಬಾಲಿವುಡ್‌ ದಂಪತಿ ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ಬಚ್ಚನ್‌ ಪುತ್ರಿ ಆರಾಧ್ಯಾ ಮಾಡಿದ ಭಾಷಣ ಈಗ ವೈರಲ್‌ ಆಗಿದೆ. ಪುತ್ರಿಯ ಶಾಲೆಯ ವಾರ್ಷಿಕ ದಿನ ಪ್ರಯುಕ್ತ ಈ ಕಾರ್ಯಕ್ರಮ ನಡೆದಿತ್ತು.

Advertisement

ಅದರಲ್ಲಿ ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಆರಾಧ್ಯಾ ಹಸಿರು ಮತ್ತು ಕೆಂಪು ಬಣ್ಣದ ದಿರಿಸು ತೊಟ್ಟು, “ನಾನು ಕನ್ಯಾ, ನಾನು ಕನಸು. ಹೊಸ ದಿನಗಳ ಕನಸು. ಹೊಸ ಜಗತ್ತನ್ನು ನಾವು ಎಚ್ಚರಿಸುತ್ತೇವೆ. ಆ ಜಗತ್ತಿನಲ್ಲಿ ಸುರಕ್ಷಿತವಾಗಿರುತ್ತೇನೆ. ನಾನು ಅಲ್ಲಿ ಪ್ರೀತಿ, ಗೌರವ ಪಡೆಯುತ್ತೇನೆ. ಅಲ್ಲಿ ನನ್ನ ಧ್ವನಿಯನ್ನು ಹತ್ತಿಕ್ಕಲಾಗುವುದಿಲ್ಲ. ಆದರೆ ಪ್ರೌಢಿಮೆಯಿಂದ ಅಭಿಪ್ರಾಯಗಳಿಗೆ ಗೌರವ ಸೂಚಿಸಲಾಗುತ್ತದೆ. ಜೀವನ ಎಂಬ ಪುಸ್ತಕಗಳಿಂದ ಅನುಭವ ಹೊರ ಬರುತ್ತದೆ. ಇದರಿಂದಾಗಿ ಮಾನವತೆ ಎಂಬ ನದಿಯ ಜತೆಗೆ ಅದು ಹರಿಯುತ್ತದೆ. ನಾವು ಯಾರಿಗೂ ಕಮ್ಮಿ ಇಲ್ಲ’ ಎಂದು ಹೇಳಿರುವ ಮಾತುಗಳು ವೈರಲ್‌ ಆಗಿವೆ. ಕಾರ್ಯಕ್ರಮದಲ್ಲಿ ಅಮಿತಾಭ್‌ ಬಚ್ಚನ್‌, ರವೀನಾ ಟಂಡನ್‌, ಶಾರುಖ್‌ ಖಾನ್‌ ಸೇರಿದಂತೆ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next