Advertisement

ದಿಲ್ಲಿ ಮೆಟ್ರೋ ಮೆಜೆಂಟಾ : ಕೇಜ್ರಿ ಕಡೆಗಣನೆ, ಹಣ ವಾಪಸ್‌ ಮಾಡಿ

03:04 PM Dec 25, 2017 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಂದ ಇಂದು ಚಾಲನೆ ಪಡೆದ ದಿಲ್ಲಿ ಮೆಟ್ರೋ ಮೆಜಂಟಾ ಲೈನ್‌ ಉದ್ಘಾಟನಾ ಕಾರ್ಯಕ್ರಮಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗೆ ಆಹ್ವಾನ ಇಲ್ಲದಿದ್ದುದರ ಬಗ್ಗೆ ಅವರ ಆಮ್‌ ಆದ್ಮಿ ಪಕ್ಷ ತೀವ್ರ ಆಕ್ರೋಷಿತವಾಗಿದೆ. 

Advertisement

ದಿಲ್ಲಿ ಮೆಟ್ರೋದ ಈ ಹೊಸ ಮೆಜಂಟಾ ಲೈನ್‌ ನಿರ್ಮಾಣ ಕಾಮಗಾರಿಯ ಒಟ್ಟು ವೆಚ್ಚದ ಶೇಕಡಾ 50ರಷ್ಟನ್ನು ಭರಿಸಿರುವ ಆಪ್‌ ಸರಕಾರಕ್ಕೆ ಆ ಹಣವನ್ನು ಕೇಂದ್ರ ಸರಕಾರ ಹಿಂದಿರುಗಿಸಬೇಕು ಎಂದು ಆಪ್‌ ಚಂಡಿ ಹಿಡಿದಿದೆ.

ಕೇಜ್ರಿವಾಲ್‌ ಅವರನ್ನು ಈ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸದಿರುವ ಬಗ್ಗೆ ಹಿರಿಯ ಆಪ್‌ ನಾಯಕ ಸಂಜಯ್‌ ಸಿಂಗ್‌ “ಈ ಕ್ರಮವು ದಿಲ್ಲಿ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸರಕಾರ ವೈಯಕ್ತಿಕ ವೈರತ್ಯ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ಈ ಹಿಂದೆ ದಿಲ್ಲಿ ಮೆಟ್ರೋ ರೈಲ್‌ ಕಾರ್ಪೊರೇಶನ್‌ನ ಫ‌ರೀದಾಬಾದ್‌ ಕಾರಿಡಾರ್‌ ಉದ್ಘಾಟನೆಯ ಸಂದರ್ಭದಲ್ಲೂ ಕೇಜ್ರಿವಾಲ್‌ ಅವರನ್ನು ಕಡೆಗಣಿಸಲಾಗಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next