Advertisement

Chennai flood: ಜನಸಾಮಾನ್ಯರ ಜೊತೆ ಪ್ರವಾಹದಲ್ಲಿ ಸಿಲುಕಿದ ನಟ ಅಮೀರ್ ಖಾನ್, ವಿಷ್ಣು ವಿಶಾಲ್

10:19 AM Dec 06, 2023 | Team Udayavani |

ಚೆನ್ನೈ: ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ಥಗೊಂಡಿದೆ, ಚೆನ್ನೈನಲ್ಲಿ ಸುರಿದ ಭಾರಿ ಮಳೆಗೆ ಕೇವಲ ಜನಸಾಮಾನ್ಯರು ಮಾತ್ರವಲ್ಲದೆ ಫಿಲ್ಮ್ ಇಂಡಸ್ಟ್ರಿಯ ಕೆಲವು ಸ್ಟಾರ್ ನಟರೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಹೌದು ಈ ಭಾರಿಯ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿದವರಲ್ಲಿ ತಮಿಳು ನಟ ವಿಷ್ಣು ವಿಶಾಲ್, ಹಾಗೂ ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಕೂಡ ಸೇರಿದ್ದಾರೆ.

ಸೌತ್ ಸ್ಟಾರ್ ವಿಷ್ಣು ವಿಶಾಲ್ ಮನೆಗೆ ಪ್ರವಾಹದ ನೀರು ನುಗ್ಗಿದ್ದು ಇದರ ಚಿತ್ರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅಲ್ಲಿನ ಸುತ್ತಮುತ್ತಲ ಪ್ರದೇಶಗಳು ನೀರಿನಿಂದ ಮುಳುಗಡೆಯಾಗಿದ್ದು ಅಲ್ಲಿನ ಜನರು ಕೂಡ ಸಂಕಷ್ಟಕ್ಕೆ ಒಳಗಾಗಿದ್ದಾರೆ ಬದಲಾಗಿ, ಇಲ್ಲಿ ವಿದ್ಯುತ್ ಸಂಪರ್ಕ ಕೂಡಾ ಕಡಿತಗೊಂಡಿದ್ದು ಜನರ ಸಹಾಯಕ್ಕೆ ಫೋನ್ ಕರೆ ಕೂಡ ಮಾಡುವಂತಿಲ್ಲ ಎಂದು ಬರೆದುಕೊಂಡಿದ್ದಾರೆ.

ವಿಷ್ಣು ವಿಶಾಲ್ ಅವರ ಟ್ವೀಟ್ ಗಮನಿಸಿದ ಅವರ ಅಭಿಮಾನಿಗಳು ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ ಕೂಡಲೇ ರಕ್ಷಣಾ ತಂಡ ವಿಷ್ಣು ವಿಶಾಲ್ ಅವರು ಇರುವ ಪ್ರದೇಶಕ್ಕೆ ತೆರಳಿ ವಿಷ್ಣು ವಿಶಾಲ್ ಕುಟುಂಬ ಹಾಗು ಅಲ್ಲಿನ ಇತರ ಜನರನ್ನು ರಕ್ಷಣೆ ಮಾಡಿದ್ದಾರೆ.

ಈ ವೇಳೆ ಚೆನ್ನೈ ನಲ್ಲಿ ನೆಲೆಸಿರುವ ಬಾಲಿವುಡ್ ನಟ ಅಮೀರ್ ಖಾನ್ ಕೂಡ ಪ್ರವಾಹದಲ್ಲಿ ಸಿಲುಕಿದ್ದು ಅವರ ತಾಯಿಯ ಚಿಕಿತ್ಸೆಗಾಗಿ ಕಳೆದ ಕೆಲವು ಸಮಯಗಳಿಂದ ಚೆನ್ನೈನಲ್ಲಿ ಅಮೀರ್ ಖಾನ್ ನೆಲೆಸಿದ್ದಾರೆ ಸದ್ಯ ರಕ್ಷಣಾ ತಂಡ ಅಮೀರ್ ಕುಟುಂಬವನ್ನೂ ರಕ್ಷಣೆ ಮಾಡಿದ್ದಾರೆ.

Advertisement

ರಕ್ಷಣಾ ತಂಡದ ಕಾರ್ಯದ ಕುರಿತು ನಟ ವಿಷ್ಣು ವಿಶಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದು ರಕ್ಷಣಾ ತಂಡದ ಜೊತೆ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Chhattisgarh: ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿ ತಂದೆಯ ಶವ ಬಾವಿಯಲ್ಲಿ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next