Advertisement

ಮಲೇಷ್ಯಾದಲ್ಲೂ ಆಧಾರ್‌ 

11:16 AM Oct 15, 2018 | Team Udayavani |

ಹೊಸದಿಲ್ಲಿ:  ಭಾರತದಲ್ಲಿ ಆಧಾರ್‌ಅನ್ನು ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಲಿಂಕ್‌ ಮಾಡಿದ್ದು ಮಹತ್ತರ ಬದಲಾವಣೆಗೆ ಕಾರಣವಾಗಿದೆ. ಅದು ಮಲೇಷ್ಯಾ ಸರಕಾರದ ಗಮನ ಸೆಳೆದಿದೆ. ಸದ್ಯ ಜಾರಿಯಲ್ಲಿರುವ ರಾಷ್ಟ್ರೀಯ ಗುರುತು ಚೀಟಿ  ವ್ಯವಸ್ಥೆಯಲ್ಲಿ ಬದಲು ಮಾಡಲು ಅಲ್ಲಿನ ಸರಕಾರ ಮುಂದಾಗಿದ್ದು, ಕಲ್ಯಾಣ ಯೋಜನೆಗಳಿಗೆ ಲಿಂಕ್‌ ಮಾಡಲು ಮುಂದಾಗಿದೆ.
ಮೇನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೌಲಾಲಂಪುರಕ್ಕೆ ಭೇಟಿ ನೀಡಿದ್ದಾಗ ಆಧಾರ್‌ ಯಶಸ್ಸಿನ ಬಗ್ಗೆ ಮಲೇಷ್ಯಾ ಪ್ರಧಾನಿ ಮಹಾತಿರ್‌ ಮೊಹಮ್ಮದ್‌ಗೆ ವಿವರಿಸಿದ್ದರು. ಅದಕ್ಕೆ ಪೂರಕವಾಗಿ ಅಲ್ಲಿನ ಉನ್ನತ ಮಟ್ಟದ ನಿಯೋಗ ಕಳೆದ ವಾರ ಹೊಸದಿಲ್ಲಿಗೆ ಆಗಮಿಸಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಸೇರಿದಂತೆ ಪ್ರಮುಖರ ಜತೆ ಮಾತುಕತೆ ನಡೆಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next