Advertisement
ಅತೀ ಮುಖ್ಯವಾಗಿ ಅನ್ನಭಾಗ್ಯ, ನೀರಾವರಿ ಪಂಪ್ಸೆಟ್, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಸಾಮಾಜಿಕ ಭದ್ರತಾ ಪಿಂಚಣಿ, ಸಹಾಯ ಧನ ಬೆಂಬಲ ಮೊದಲಾದವುಗಳನ್ನು ಮತ್ತೂಮ್ಮೆ ಪರಿಶೀಲಿಸಿ ನೇರ ಸಹಾಯಧನ ವರ್ಗಾ ವಣೆ ಯನ್ನು “ಆಧಾರ್’ನೊಂದಿಗೆ ಜೋಡಿಸಿ ಅನರ್ಹ ಫಲಾನುಭವಿಗಳನ್ನು ಕೈ ಬಿಡಲು ಜಿಲ್ಲಾವಾರು ಸಮೀಕ್ಷೆ ಕೈಗೊಳ್ಳುವಂತೆ ಸಮಿತಿ ಸಲಹೆ ನೀಡಿದೆ.
ಏನೇನು ಸಲಹೆ?
Related Articles
Advertisement
ರೈತರ ಸಾಲ ಮನ್ನಾ ಯೋಜನೆಯಿಂದ ವೆಚ್ಚಗಳು ಹೆಚ್ಚಾಗಿವೆ. ಹೀಗಾಗಿ, ಆಯ-ವ್ಯಯದ ಅನಂತರ ಪೂರಕ ಅನುದಾನದ ಅಗತ್ಯತೆ ಕಡಿಮೆ ಗೊಳಿಸಬೇಕು.
ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆಯ 2013-14ನೇ ವರ್ಷದಲ್ಲಿ ಜಾರಿಗೆ ಬಂದಿದ್ದು, ಕಳೆದ ಐದು ವರ್ಷಗಳ ಅನುಭವದ ಆಧಾರದ ಮೇಲೆ ಆರ್ಥಿಕ ಇಲಾಖೆಯು ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಸಮಾಲೋಚಿಸಿ ಹಂಚಿಕೆಗಳ ಲೆಕ್ಕಾಚಾರ ಸರಿಯಾಗಿ ಮಾಡುವ ಮಾರ್ಗಗಳನ್ನು ಪರಿಶೀಲಿಸಬಹುದು.6ನೇ ವೇತನ ಆಯೋಗದ ಶಿಫಾರಸು ಪ್ರಕಾರ, ವಿವಿಧ ವೃಂದಗಳು ಮತ್ತು ಇಲಾಖೆಗಳ ವಿಲೀನ, ಖಾಲಿ ಹುದ್ದೆಗಳ ಮರು ನಿಯೋಜನೆ. ಮಾರ್ಗೋಪಾಯ ಕಂಡುಕೊಳ್ಳಿ
ಜಿಎಸ್ಟಿ ನಷ್ಟ ಪರಿಹಾರವು 2022-23ರಿಂದ ಸ್ಥಗಿತಗೊಳ್ಳುವ ಕಾರಣ, ರಾಜಸ್ವ ಸಂಗ್ರಹಣೆಯಲ್ಲಿ ಇಳಿಕೆ ಯಾಗುವುದರಿಂದ ರಾಜ್ಯದ ಅಭಿ ವೃದ್ಧಿ ಕಾರ್ಯ ಗಳಿಗೆ ಪೆಟ್ಟು ಬೀಳುವ ಸಾಧ್ಯತೆ ಯಿದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಈ ವಿಷಯವನ್ನು ಆರ್ಥಿಕ ಇಲಾಖೆಯು ಜಿಎಸ್ಟಿ ಸಮಿತಿ ಮತ್ತು ಕೇಂದ್ರ ಸರಕಾರದ ಗಮನಕ್ಕೆ ತಂದು ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ವಿತ್ತೀಯ ನಿರ್ವಹಣ ಪರಿಶೀಲನ ಸಮಿತಿಯು ರಾಜ್ಯ ಸರಕಾರಕ್ಕೆ ಸಲಹೆ ನೀಡಿದೆ. ಎಸ್. ಲಕ್ಷ್ಮೀನಾರಾಯಣ