Advertisement

ಸಹಾಯಧನಕ್ಕೆ ಆಧಾರ ಕಡ್ಡಾಯ: ವಾಟ್ಸ್‌ಆ್ಯಪ್‌ನಲ್ಲಿ ನಂಬರ್‌ ನಮೂದಿಸಿ

03:37 PM Apr 18, 2020 | Suhan S |

ಬೆಳಗಾವಿ: ಕೋವಿಡ್ 19  ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಹಾಯಧನ ಬಿಡುಗಡೆ ಮಾಡಲು ಆಧಾರ ಸಂಖ್ಯೆ ಕಡ್ಡಾಯವಾಗಿದೆ. ಆದ್ದರಿಂದ ಕಾರ್ಮಿಕರು ವಾಟ್ಸ್‌ಆ್ಯಪ್‌ ಮೂಲಕ ಆಧಾರ್‌ ಸಂಖ್ಯೆ ಸಲ್ಲಿಸಬೇಕು ಎಂದು ಉಪಕಾರ್ಮಿಕ ಆಯುಕ್ತರು ತಿಳಿಸಿದ್ದಾರೆ.

Advertisement

ಬೆಳಗಾವಿ ಜಿಲ್ಲೆಯಲ್ಲಿ 2007ರಿಂದ 2016 ವರೆಗೆ ನೋಂದಣಿಯಾದ ಕಾರ್ಮಿಕರಲ್ಲಿ ಈ ಕಚೇರಿಯಲ್ಲಿ ಲಭ್ಯವಿರುವ ಸುಮಾರು 16,900 ಫಲಾನುಭವಿಗಳ ಖಾತೆ ಧನಸಹಾಯ ಜಮೆ ಮಾಡಲು ಬೆಂಗಳೂರಿನ ಕೆನರಾ ಬ್ಯಾಂಕ್‌ಗೆ ಸಲ್ಲಿಸಲಾಗಿದೆ. ಬಾಕಿ ಉಳಿದ ಫಲಾನುಭವಿಗಳು ತಾವು ನೋಂದಣಿಯಾದ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ 1ನೇ ವೃತ್ತ ಬೆಳಗಾವಿ ರವರ ಮೊ. 9448693553, ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ಮೊ. 9482214540, ಹಿರಿಯ ಕಾರ್ಮಿಕ ನಿರೀಕ್ಷಕರು, ಮೊ. 9448776366, ಹಿರಿಯ ಕಾರ್ಮಿಕ ನಿರೀಕ್ಷಕರು ಮೊ. 9945486689. ಕಾರ್ಮಿಕ ನಿರೀಕ್ಷಕರು ಬೈಲಹೊಂಗಲ ಮತ್ತು ಖಾನಾಪುರ ಮೊ. 9901198804, ಸವದತ್ತಿ ಮತ್ತು ರಾಮದುರ್ಗ ಮೊ.7022054094, ಗೋಕಾಕ ಮತ್ತು ರಾಯಭಾಗ ಮೊ. 9845251545. ಚಿಕ್ಕೋಡಿ, ಹುಕ್ಕೇರಿ ಮತ್ತು ನಿಪ್ಪಾಣಿ ವೃತ್ತ ಮೊ. 9900428760, ಅಥಣಿ-ಮೊ.9743508295 ಸಂಖ್ಯೆಗಳಿಗೆ ವಾಟ್ಸ್‌ ಆ್ಯಪ್‌ ಮೂಲಕ ತಮ್ಮ ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ, ಫಲಾನುಭವಿಯ ನೋಂದಣಿ ಗುರುತಿನ ಚೀಟಿ ಹಾಗೂ ಕಡ್ಡಾಯವಾಗಿ ಆಧಾರ ಕಾರ್ಡ್‌ ಸಂಖ್ಯೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ಉಪ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next