Advertisement

ಬಿಜೆಪಿಯಿಂದ ಮನೆ ಮನೆಗೆ ಆಧಾರ್‌ ಕಾರ್ಡ್‌ ಅಭಿಯಾನ 

10:16 AM Dec 07, 2017 | Team Udayavani |

ಮಹಾನಗರ: ನಗರದಲ್ಲಿ ವಾಸವಾಗಿದ್ದು, ದೈಹಿಕ ಅಶಕ್ತರಾಗಿರುವ ನಾಗರಿಕರಿಗೆ ಮಂಗಳೂರು ನಗರ ದಕ್ಷಿಣ ಮಂಡಲ ಬಿಜೆಪಿ ಅಧ್ಯಕ್ಷ ಡಿ. ವೇದವ್ಯಾಸ್‌ ಕಾಮತ್‌ ನೇತೃತ್ವದಲ್ಲಿ ಬುಧವಾರ ಮನೆ ಮನೆಗೆ ತೆರಳಿ ಆಧಾರ್‌ ಕಾರ್ಡ್‌ ಸೌಲಭ್ಯ ದೊರಕಿಸಿಕೊಡಲಾಯಿತು.

Advertisement

ನಗರದ ವಿಶಾಲ್‌ ನರ್ಸಿಂಗ್‌ ಹೋಮ್‌ನ ಆಸುಪಾಸಿನ ನಿವಾಸಿಗಳ ಮನೆಗೆ ತೆರಳಿ ಆಧಾರ್‌ ಸೌಲಭ್ಯವನ್ನು ನೀಡಲಾಯಿತು. ಸುಮಾರು 113 ಮನೆಗಳಿಗೆ ಭೇಟಿ ನೀಡಿ ಆಧಾರ್‌ ವ್ಯವಸ್ಥೆಯನ್ನು ಮಾಡಿ ಕೊಡಲಾಯಿತು.

ಬಿಜೆಪಿ ವಾರ್ಡ್‌ ಅಧ್ಯಕ್ಷ ವಸಂತ್‌ ಶೇಟ್‌, ಕಾರ್ಯದರ್ಶಿ ಮಹೇಶ್‌ ಕುಂದರ್‌, ಮಂಡಲದ ಉಪಾಧ್ಯಕ್ಷ ಬಿ. ಮೋಹನ್‌ ಆಚಾರ್‌, ಬಿಜೆಪಿ ಪ್ರಮುಖರಾದ ಪ್ರಸಾದ್‌ ಬೋಳಾರ್‌, ಶ್ರೀಕಾಂತ್‌ ರಾವ್‌, ಪೃಥ್ವೇಶ್ , ರಾಜೇಶ್‌ ಕುಲಾಲ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next