Advertisement

ಸಮುದ್ರ ಪಾಲಾಗಿದ್ದ ಯುವಕನ ಶವ ಪತ್ತೆ

12:15 PM Jul 30, 2018 | Team Udayavani |

ಭಟ್ಕಳ: ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಾಗ ಸಮುದ್ರದಲ್ಲಿ ಸ್ನಾನ ಮಾಡಲು ಹೋಗಿ ನೀರು ಪಾಲಾದ ಬೆಂಗಳೂರಿನ ಯಲಹಂಕದ ಯುವಕ ಕಿರಣ್‌ ಕುಮಾರ್‌ ಶವ ರವಿವಾರ ಸಂಜೆ ಬೈಲೂರು ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.

Advertisement

ಕಿರಣ್‌ ಹಾಗೂ ಈತನ ಕುಟುಂಬದವರು ಮುರುಡೇಶ್ವರಕ್ಕೆ ಶನಿವಾರ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಸಮುದ್ರದಲ್ಲಿ ಸ್ನಾನ ಮಾಡುತ್ತಿರುವಾಗ ನಾಲ್ವರು ಸಮುದ್ರಕ್ಕೆ ಇಳಿದು ಕೊಚ್ಚಿ ಹೋಗುತ್ತಿದ್ದರು.

ಇದನ್ನು ಕಂಡ ಸ್ಥಳೀಯರು ಮೂವರನ್ನು ರಕ್ಷಿಸಿದ್ದರು. ಒಬ್ಬ ಮಾತ್ರ ನೀರು ಪಾಲಾಗಿದ್ದ. ರವಿವಾರ ಸಂಜೆ ಆತನ ಶವ ಪತ್ತೆಯಾಗಿದೆ. ಮುರುಡೇಶ್ವರ ಠಾಣೆ ಪೊಲೀಸರು ಶವ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next