Advertisement

Srirangapatna: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಯುವಕ ಸಾವು

09:06 PM Jun 27, 2024 | Team Udayavani |

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪಟ್ಟಣ ಹೊರವಲಯದ ಕಾವೇರಿ ಕನ್ಯಾ ಗುರುಕುಲದ ಬಳಿ ನಡೆದಿದೆ.

Advertisement

ಚಿಕ್ಕಮಗಳೂರು ನಿವಾಸಿ ಶಿವಮೂರ್ತಿ ಎಂಬುವರ ಪುತ್ರ ಬಿ.ಎಸ್‌.ಸಂದೀಪ್‌ಕುಮಾರ್‌(29) ಮೃತನು.

ಈತ ಚಿಕ್ಕಬಳ್ಳಾಪುರದ ಇಶಾ ಫೌಂಡೇಷನ್‌ನಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದು, ತನ್ನ 20 ಸ್ವಯಂ ಸೇವಕ ಸ್ನೇಹಿತರೊಂದಿಗೆ ಕಳೆದ 2-3 ದಿನಗಳ ಹಿಂದೆ ಕಾವೇರಿ ಕನ್ಯಾಗುರುಕುಲಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದನು. ಗುರುವಾರ ಮಧ್ಯಾಹ್ನ ಐದಾರು ಸ್ನೇಹಿತರೊಂದಿಗೆ ಕಾವೇರಿ ನದಿಗಿಳಿದು ಈಜಾಡುತ್ತಿದ್ದ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆೆ.

 

Advertisement

Udayavani is now on Telegram. Click here to join our channel and stay updated with the latest news.

Next