Advertisement

Scheme!;ವಿವಾಹ ಯೋಜನೆಯ ಲಾಭಕ್ಕೆ ಸೋದರನ ಜತೆಗೆ ವಿವಾಹವಾದ ಮಹಿಳೆ

12:54 AM Mar 21, 2024 | Team Udayavani |

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿ ನಗದು, ಉಡುಗೊರೆ ಪಡೆಯಲು ವಿವಾಹಿತ ಮಹಿಳೆ ಸ್ವಂತ ಸಹೋದರನನ್ನೇ ವಿವಾಹವಾದ ಘಟನೆ ನಡೆದಿದೆ. ಮಹಾರಾಜ್‌ಗಂಜ್‌ನ ಲಕ್ಷ್ಮೀಪುರದಲ್ಲಿ 38 ಜೋ ಡಿಗೆ ಸರಕಾರದ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು. ಅದರಲ್ಲಿ ಈ ಘಟನೆ ನಡೆದಿದೆ.

Advertisement

ಈ ಯೋಜನೆಯಡಿ ಮದುವೆಯಾದ ಪ್ರತೀ ಬಡ ಜೋಡಿಗೆ 51,000 ರೂ. ನೀಡಲಾ ಗುತ್ತದೆ. ಈ ಪೈಕಿ 35000 ರೂ.ಗಳನ್ನು ವಧುವಿನ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತದೆ. ಉಳಿದ ಹಣವನ್ನು ಉಡುಗೊರೆಗಳನ್ನು ನೀಡಲು ಬಳಸಲಾಗುತ್ತದೆ. ಈಗಾಗಲೇ ಅವರಿಂದ ಉಡುಗೊರೆ ಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರ ವಿರುದ್ಧ ಕ್ರಮ ಕೈ ಗೊಳ್ಳಲಾಗುವುದೆಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next