Advertisement

ರೈಲು ಹಳಿಗೆ ಹಾರಿ ಮಹಿಳೆ ಆತ್ಮಹತ್ಯೆ

03:45 AM Feb 18, 2017 | Team Udayavani |

ಉಡುಪಿ: ಅನಾರೋಗ್ಯದಿಂದ ಬೇಸತ್ತು  ರೈಲ್ವೇ ಬ್ರಿಡ್ಜ್ನ ಮೇಲಿನಿಂದ ಕೆಳಗೆ ಹಾರಿ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದ್ರಾಳಿಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಕುಂದಾಪುರದ ಅಮಾrಡಿಯ ಮುಸ್ತಾರ್‌ ಅಹಮದ್‌ ಅವರ ಪತ್ನಿ ಜಾಹೀದಾ ಬಾನು (48) ಆತ್ಮಹತ್ಯೆ ಮಾಡಿಕೊಂಡವರು.

Advertisement

28 ವರ್ಷದಿಂದ ಕಾಲಿಗೆ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಚಿಕಿತ್ಸೆಗೆ ನೆರವಾಗಲೆಂದು ಇಂದ್ರಾಳಿಯ ರೈಲು ಸ್ಟೇಶನ್‌ ಬಳಿ ಅಪಾರ್ಟ್‌ಮೆಂಟ್‌ನಲ್ಲಿ ರೂಮ್‌ ಮಾಡಿಕೊಂಡು ಪತಿ ಜತೆ ವಾಸವಾಗಿದ್ದರು. ಶುಕ್ರವಾರ ಬೆಳಗಿನ ಜಾವ ತನ್ನ ಕಾಯಿಲೆಯಿಂದ ಬೇಸತ್ತು ರೈಲ್ವೇ ಬ್ರಿಡ್ಜ್ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮಣಿಪಾಲ – ಉಡುಪಿ ರಾಜ್ಯ ಹೆದ್ದಾರಿಯಲ್ಲೇ ಘಟನೆ ಸಂಭವಿಸಿದ್ದು, ಆರಂಭದಲ್ಲಿ ಅಪರಿಚಿತ ಮೃತದೇಹ ಎಂದು ನೋಡಲು ಭಾರೀ ಸಂಖ್ಯೆಯಲ್ಲಿ  ಜನ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next