Advertisement

Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ

07:24 PM Jul 06, 2024 | Team Udayavani |

ಕಾಸರಗೋಡು: ಮುಳಿಯಾರು ಸೇತುವೆ ಬಳಿಯ ಚಿರಾಂಕೋಡ್‌ನ‌ ಅಬ್ದುಲ್ಲ ಕುಂಞಿ ಅವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಒಂಭತ್ತು ತಿಂಗಳ ಕರುವನ್ನು ಯಾವುದೋ ಕಾಡು ಪ್ರಾಣಿ ಕಚ್ಚಿ ಕೊಂದು ಹಾಕಿದ ಘಟನೆ ನಡೆದಿದೆ. ಕರುವನ್ನು ಚಿರತೆ ಕೊಂದು ಹಾಕಿರಬಹುದೆಂದು ಶಂಕಿಸಲಾಗಿದೆ.

Advertisement

ವಿಷಯ ತಿಳಿದು ಕಾಸರಗೋಡು ಅರಣ್ಯ ರೇಂಜ್‌ ಆಫೀಸರ್‌ ವಿನೋದ್‌ ಕುಮಾರ್‌ ನೇತೃತ್ವದ ಅರಣ್ಯ ಪಾಲಕರ ತಂಡ ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದೆ. ಮುಳಿಯಾರು ಪಶು ಸಂಗೋಪನಾ ಆಸ್ಪತ್ರೆಯ ವೆಟರ್ನರಿ ಸರ್ಜನ್‌ ಡಾ|ಅತುಲ್‌ ಗಣೇಶ್‌ ಸ್ಥಳಕ್ಕೆ ಆಗಮಿಸಿ ಕರುವಿನ ಕಳೆಬರವನ್ನು ಪರಿಶೀಲಿಸಿದರು. ಆದರೆ ಚಿರತೆ ಕಡಿದು ಕೊಂದ ಬಗ್ಗೆ ಯಾವುದೇ ಕುರುಹುಗಳು ಕಂಡು ಬಂದಿಲ್ಲ. ಆದ್ದರಿಂದ ಬೀದಿ ನಾಯಿಗಳ ಗುಂಪು ಕರುವನ್ನು ಕಚ್ಚಿಕೊಂದಿರ ಬಹುದೆಂದು ಅರಣ್ಯ ಇಲಾಖೆಯವರು ವ್ಯಕ್ತಪಡಿಸಿದ್ದಾರೆ.

ಮುಳಿಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಲವೆಡೆ ಕೆಲವು ದಿನಗಳ ಹಿಂದೆ ಚಿರತೆಯನ್ನು ಕಂಡಿರುವುದಾಗಿ ಸ್ಥಳೀಯರು ತಿಳಿಸಿದ್ದರು. ಆದರೆ ಅರಣ್ಯ ಪಾಲಕರು ಇನ್ನೂ ದೃಢಪಡಿಸಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next