Advertisement

ಪೇಜಾವರ ಮಠದ ವಿಶ್ವೇಶತೀರ್ಥರ ವೃಂದಾವನಕ್ಕೆ ಭೇಟಿ

11:43 PM Jan 18, 2020 | Lakshmi GovindaRaj |

ಬೆಂಗಳೂರು: ರಾಜ್ಯ ಪ್ರವಾಸದಲ್ಲಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶನಿವಾರ ಮಧ್ಯಾಹ್ನ ಕತ್ರಿಗುಪ್ಪೆಯ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿರುವ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ವೃಂದಾ ವನಕ್ಕೆ ಭೇಟಿ ನೀಡಿ ಭಕ್ತಿ ನಮನ ಸಲ್ಲಿಸಿದರು.

Advertisement

ಅರಮನೆ ಮೈದಾನದ ಕಾರ್ಯಕ್ರಮ ಬಳಿಕ ವಿದ್ಯಾಪೀಠಕ್ಕೆ ಆಗಮಿಸಿದ ಅಮಿತ್‌ ಶಾ, ಮೊದಲು ಬೃಂದಾವನ ಪಕ್ಕದ ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು. ಬಳಿಕ ಶ್ರೀಗಳ ವೃಂದಾವನಕ್ಕೆ ಮತ್ತು ವೃಂದಾವನದ ಮುಂಭಾಗ ಇರಿಸಿದ್ದ ಶ್ರೀಗಳ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕೆಲ ನಿಮಿಷಗಳವರೆಗೆ ಧ್ಯಾನ ಮಾಡಿದರು. ಇದೇ ವೇಳೆ ಮಠದ ವಿದ್ವಾಂಸ ಹರಿದಾಸ ಭಟ್ಟ ಅವರು ಗೃಹ ಸಚಿವರಿಗೆ ಶಾಲು ಹೊದಿಸಿ ಗೌರವಿಸಿದರು.

ವೃಂದಾವನಕ್ಕೆ ನಮನ ಸಲ್ಲಿಸಿದ ನಂತರ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಅಮಿತ್‌ ಶಾ ಅವರು ದೂರವಾಣಿ ಕರೆ ಮಾಡಿ, ವಿದ್ಯಾಪೀಠಕ್ಕೆ ಬಂದಿರುವುದಾಗಿ ತಿಳಿಸಿದರು. ಉಡುಪಿಯ ಮಠಕ್ಕೂ ಬರುವಂತೆ ಶ್ರೀಗಳು ಆಹ್ವಾನ ನೀಡಿದರು ಎಂದು ಮಠದ ಮೂಲಗಳು ತಿಳಿಸಿವೆ. ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವತ್ಥನಾರಾಯಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next