Advertisement

ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ : ಸವಾರರು ಪ್ರಾಣಾಪಾಯದಿಂದ ಪಾರು

11:00 AM Aug 29, 2021 | Team Udayavani |

ಬಂಟ್ವಾಳ : ತಾಲೂಕಿನ ಬಂಟ್ವಾಳ ಧರ್ಮಸ್ಥಳ ರಸ್ತೆಯ ಭಂಡಾರಿಬೆಟ್ಟು ಎಸ್ಕೇಪ್ ರಸ್ತೆಯ ತಿರುವುನಲ್ಲಿ ಶನಿವಾರ ಸಂಜೆ  ಅಪಘಾತ ನಡೆದಿದೆ. ಅಪಘಾತದ ದೃಶ್ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ.

Advertisement

ಅಪಘಾತದಲ್ಲಿ ಕಕ್ಯೆಪದವು ನಿವಾಸಿ ಕೃಷ್ಣಮಯ್ಯ ಅವರಿಗೆ ಸಣ್ಣ ಪುಟ್ಟ ಗಾಯ ಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಜೊತೆ ಸಹ ಸವಾರ ಸಹೋದರ ಸೂರ್ಯನಾರಾಯಣ ಮಯ್ಯ ಅಪಾಯ ವಿಲ್ಲದೆ ಪಾರಾಗಿದ್ದಾರೆ.

ಬಂಟ್ವಾಳ ಬೈಪಾಸ್ ರಸ್ತೆಯಿಂದ ಬಂಟ್ವಾಳ ಪೇಟೆಗೆ ಭಂಡಾರಿ ಬೆಟ್ಟು ಎಂಬಲ್ಲಿಂದ ಎಸ್ಕೇಪ್ ರೋಡ್ ಗೆ ಕ್ರಾಸ್ ಮಾಡುವ ವೇಳೆ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಆಲ್ಟೋ ಕಾರು ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆಯುವ ದೃಶ್ಯ ಸಿ‌ಸಿಟಿ.ವಿಯಲ್ಲಿ ಸೆರೆಯಾಗಿದೆ.

ಅಪಘಾತದ ರಭಸಕ್ಕೆ ಬೈಕ್ ಸವಾರಿಬ್ವರು ರಸ್ತೆಯ ಮೇಲೆ ಎಸೆಯುವ ದೃಶ್ಯ ಕೂಡ ಇದೆ. ಅದೃಷ್ಟವಶಾತ್ ಬೈಕ್ ಸವಾರ ಕೃಷ್ಣ ಮಯ್ಯ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಜೊತೆಗೆ ಸಹಸವಾರ ಸಹೋದರ ಸೂರ್ಯನಾರಾಯಣ ಮಯ್ಯ ಅವರಿಗೆ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ. ಮೆಲ್ಕಾರ್ ಟ್ರಾಫಿಕ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next