Advertisement

Kasargod: ಹಾವು ಕಡಿದು ಸಾವಿಗೀಡಾದ ಮಹಿಳೆಯ ಮನೆಯಲ್ಲಿ ವಿಚಿತ್ರ ಘಟನೆ

08:45 PM Jul 06, 2024 | Team Udayavani |

ಕಾಸರಗೋಡು: ನಾಗರ ಹಾವಿನ ಕಡಿತದಿಂದ ಸಾವಿಗೀಡಾದ ಮಹಿಳೆಯ ಅಂತ್ಯ ಸಂಸ್ಕಾರದ ಬಳಿಕ ಅವರ ಮನೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಈ ಘಟನೆ ಕುಟುಂಬ ಹಾಗು ಸಂಬಂಧಿಕರಿಗೆ ಅಚ್ಚರಿ ಜೊತೆಗೆ ಆತಂಕವನ್ನೂ ಸೃಷ್ಟಿಸಿದೆ.

Advertisement

ಕುರುಡಪದವು ನಿವಾಸಿ ದಿ|ಮಾಂಕು ಅವರ ಪತ್ನಿ ಚೋಮು(64) ಬುಧವಾರ ರಾತ್ರಿ ನಾಗರ ಹಾವು ಕಡಿದು ಸಾವಿಗೀಡಾಗಿದ್ದರು. ಮನೆಯೊಳಗೆ ನಿದ್ದೆ ಮಾಡಿದ್ದ ಚೋಮು ಅವರಿಗೆ ರಾತ್ರಿ 12ಗಂಟೆಗೆ ಹಾವು ಕಡಿದಿತ್ತು. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಿರಲಿಲ್ಲ. ಚೋಮು ಅವರ ಅಂತ್ಯ ಸಂಸ್ಕಾರ ಗುರುವಾರ ನಡೆಸಲಾಗಿತ್ತು. ಆ ಬಳಿಕ ರಾತ್ರಿ ವೇಳೆ ಸಂಪ್ರದಾಯ ಪ್ರಕಾರ ಮನೆಯ ಚಾವಡಿಯಲ್ಲಿ ಬೂದಿ ಹರಡಿ ಅದರ ಮಧ್ಯೆ ಜೊಂಬಿನಲ್ಲಿ ನೀರು ಇಡಲಾಗಿತ್ತು. ಮನೆಯ ಬಾಗಿಲುಗಳನ್ನು ಭದ್ರಪಡಿಸಿ ಮನೆ ಮಂದಿ ಸಹಿತ ನಾಲ್ಕು ಮಂದಿ ಜಗಲಿಯಲ್ಲಿ ನಿದ್ದೆ ಮಾಡಿದ್ದರು. ಜು.5 ರಂದು ಬೆಳಗ್ಗೆ ಎದ್ದು ನೋಡಿದಾಗ ಬೂದಿ ಮೇಲೆ ಹಾವು ಹರಿದ ಗುರುತು ಹಾಗು ಚೊಂಬಿನಲ್ಲಿದ್ದ ನೀರಿನ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂತು.

ಚೋಮು ಅವರಿಗೆ ಕಡಿದ ನಾಗರಹಾವನ್ನು ಗುರುವಾರ ಬೆಳಗ್ಗೆ ಹಿಡಿದು ಕೊಂಡೊಯ್ದು ದೂರದ ಅರಣ್ಯದಲ್ಲಿ ಬಿಡಲಾಗಿತ್ತು. ಅಲ್ಲದೆ ಮನೆಯೊಳಗೆ ಬೇರೆ ಹಾವು ಇಲ್ಲವೆಂದು ಖಚಿತಪಡಿಸಲಾಗಿತ್ತು. ಆದರೆ ಬೂದಿಯ ಮೇಲೆ ಹಾವಿನ ಸಂಚಾರ ಗುರುತು ಕಂಡು ಬಂದಿದ್ದು, ಅಚ್ಚರಿಗೆ ಕಾರಣವಾಗಿದೆ. ಹಾವಿನ ಸಂಚಾರದ ಗುರುತು ಹೇಗೆ ಉಂಟಾಯಿತು ಎಂಬುದ್ದು ತಿಳಿಯುತ್ತಿಲ್ಲ ಎಂದು ಚೋಮು ಅವರ ಸಂಬಂಧಿಕ ಕುರುಡಪದವಿನ ಸತೀಶ್‌ ಹೇಳಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next