Advertisement

ಯೋಧನ ಥಳಿಸಿ ಕೊಂದ ಡಿಎಂಕೆ ನಾಯಕ

10:08 AM Feb 16, 2023 | Team Udayavani |

ಚೆನ್ನೈ: ನೀರಿನ ಟ್ಯಾಂಕ್‌ ಬಳಿ ಬಟ್ಟೆ ತೊಳೆಯುವ ವಿಚಾರದಲ್ಲಿ ಭಾರತೀಯ ಸೇನೆಯ ಯೋಧರೊಬ್ಬರನ್ನು ಡಿಎಂಕೆ ಪಕ್ಷದ ಕೌನ್ಸಿಲರ್‌ ಮಾರಣಾಂತಿಕವಾಗಿ ಥಳಿಸಿ, ಇದರಿಂದ ಯೋಧ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ಫೆ.8ರಂದು ಕೃಷ್ಣಗಿರಿಯ ಪೊಚಂಪಲ್ಲಿ ಎಂಬಲ್ಲಿ ನೀರಿನ ಟ್ಯಾಂಕ್‌ ಬಳಿ ಬಟ್ಟೆ ತೊಳೆಯುವ ವಿಚಾರದಲ್ಲಿ ಕೌನ್ಸಿಲರ್‌ ಚಿನ್ನಸ್ವಾಮಿ, ಆತನ ಬೆಂಬಲಿಗರು ಹಾಗೂ ಯೋಧ ಪ್ರಭು ನಡುವೆ ವಾಗ್ವಾದ ನಡೆದಿದೆ.

Advertisement

ಅದೇ ದಿನ ರಾತ್ರಿ ಚಿನ್ನಸ್ವಾಮಿ ಹಾಗೂ ಬೆಂಬಲಿಗರು ಪ್ರಭು ಮತ್ತು ಅವರ ಸಹೋದರ ಪ್ರಭಾಕರನ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಯೋಧ ಪ್ರಭು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫ‌ಲಕಾರಿಯಾಗದೇ ಮೃತ ಪಟ್ಟಿದ್ದಾರೆ. ಪ್ರಭಾಕರನ್‌ ನೀಡಿರುವ ದೂರು ಆಧರಿಸಿ ಪೊಲೀಸರು ದೂರು ದಾಖಲಿಸಿದ್ದು, ಚಿನ್ನಸ್ವಾಮಿ ಮಗ ಸಹಿತ 6 ಮಂದಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next