Advertisement

Parliament ಬೆಂಕಿ ಹಚ್ಚಿಕೊಳ್ಳಲು ಸಂಚು ಹೂಡಿದ್ದ ಹೊಗೆ ಬಾಂಬ್‌ ಗ್ಯಾಂಗ್‌

01:01 AM Dec 17, 2023 | Team Udayavani |

ಹೊಸದಿಲ್ಲಿ: ಸಂಸತ್ತಿನೊಳಗೆ ದುಷ್ಕೃತ್ಯ ಎಸಗುವ ಯೋಜನೆಗೆ ಮುನ್ನ ಆರೋಪಿಗಳು ಸದನದೊಳಗೆ ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಅವಾಂತರ ಸೃಷ್ಟಿಸಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಪ್ರಧಾನ ಆರೋಪಿ ಲಲಿತ್‌ ಮೋಹನ್‌ ಝಾ ಬಹಿರಂಗ ಪಡಿಸಿದ್ದಾನೆ.

Advertisement

ಸಂಸತ್ತಿನ ಒಳಗೆ – ಹೊರಗೆ ಬೆಂಕಿ ಹಚ್ಚಿಕೊಳ್ಳುವ ಮೂಲಕ ಗಮನ ಸೆಳೆಯುವ ಯೋಜನೆ ಹಾಕಿಕೊಂಡಿದ್ದೆವು. ಇದರಿಂದ ಸರಕಾರಕ್ಕೆ ಸಂದೇಶ ನೀಡಿದಂತಾ ಗುತ್ತದೆ ಎಂಬ ಲೆಕ್ಕಾಚಾರವಿತ್ತು ಎಂದು ಝಾ ತಿಳಿಸಿದ್ದಾಗಿ ಪೊಲೀ ಸರು ಹೇಳಿದ್ದಾರೆ.

“ಬೆಂಕಿ ಹಚ್ಚಿಕೊಳ್ಳುವುದಕ್ಕೆ ಮುನ್ನ ಶರೀರಕ್ಕೆ ಹೆಚ್ಚು ಹಾನಿಯಾಗದಂತೆ ನೋಡಿಕೊಳ್ಳಲು ದೇಹ ಪೂರ್ತಿ ಅಗ್ನಿ ನಿರೋಧಕ ಜೆಲ್‌ ಹಚ್ಚಿಕೊಳ್ಳಲು ನಿರ್ಧರಿಸಿದ್ದೆವು. ಆದರೆ ಸಾಕಷ್ಟು ಜೆಲ್‌ ಸಿಗದ ಕಾರಣ ಈ ಯೋಜನೆಯನ್ನು ಕೈಬಿಟ್ಟೆವು. ಅನಂತರ ಸಂಸತ್ತಿನೊಳಗೆ ನುಗ್ಗಿ ಜನಪ್ರತಿನಿಧಿಗಳಿಗೆ ಕರಪತ್ರಗಳನ್ನು ಹಂಚುವುದನ್ನೂ ಪರಿಗಣಿಸಿದ್ದೆವು. ಕೊನೆಗೆ, ಪ್ಲ್ಯಾನ್ ಬಿ ಪ್ರಕಾರ, ಸಂಸತ್ತಿನೊಳಗೆ ಗ್ಯಾಸ್‌ ಕ್ಯಾನಿಸ್ಟರ್‌ಗಳ ಮೂಲಕ ಹೊಗೆ ಬಾಂಬ್‌ ಸಿಡಿಸುವ ಯೋಜನೆಯನ್ನು ಅಂತಿಮಗೊಳಿಸಿದೆವು ಎಂದು ಬಂಧಿತ ಲಲಿತ್‌ ಝಾ ಪೊಲೀಸರಿಗೆ ತಿಳಿಸಿದ್ದಾನೆ.

ರಾಜಕೀಯ ಪಕ್ಷ ಸ್ಥಾಪನೆ ಗುರಿ
ನಾವೆಲ್ಲರೂ ಭಗತ್‌ ಸಿಂಗ್‌ ಮತ್ತು ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದವರು. ದೇಶದ ಸಮಸ್ಯೆಗಳನ್ನು “ಕಿವುಡಾಗಿರುವ ಕಿವಿಗಳಿಗೆ’ ತಲುಪಿಸುವುದು ನಮ್ಮ ಉದ್ದೇಶವಾಗಿತ್ತು. ಜತೆಗೆ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಗುರಿಯನ್ನೂ ಹಾಕಿಕೊಂಡಿದ್ದೆವು ಎಂದು ಆರೋಪಿಗಳು ಹೇಳಿ ದ್ದಾಗಿ ಪೊಲೀಸರು ತಿಳಿಸಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ದರಷ್ಟೇ ನಮ್ಮೆಲ್ಲ ಅಭಿಪ್ರಾಯಗಳನ್ನು ಜನರಿಗೆ ತಲುಪಿಸಲು ಸಾಧ್ಯ ಎಂದು ನಂಬಿದ್ದರು. ಪ್ರಸ್ತುತ ಇರುವ ಯಾವ ರಾಜಕೀಯ ಪಕ್ಷಗಳ ಸಿದ್ಧಾಂತ ಗಳೂ ನಮಗೆ ಒಪ್ಪಿಗೆಯಾಗುತ್ತಿಲ್ಲ. ಹೀಗಾಗಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸಲಿಲ್ಲ ಎಂದು ಸಾಗರ್‌ ಶರ್ಮಾ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next