Advertisement

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ

12:54 AM Mar 20, 2024 | Team Udayavani |

ಬಂಟ್ವಾಳ: ಸಜೀಪಮೂಡ ಗ್ರಾಮದ ಗುರುಮಂದಿರದ ಬಳಿ ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದು ಗಾಯಗೊಂಡ ಘಟನೆ ಮಾ. 18ರಂದು ನಡೆದಿದೆ.

Advertisement

ಸಜೀಪನಡು ಗ್ರಾಮ ನಿವಾಸಿ ಗಿರಿಜಾ ಗಾಯಗೊಂಡವರು. ಘಟನೆಯ ಕುರಿತು ಮಹಿಳೆಯ ತಮ್ಮ ರಾಮ ಪೂಜಾರಿ ದೂರು ನೀಡಿದ್ದು, ಚಾಲಕ ಮೊಹಮ್ಮದ್‌ ನೌಸಿರ್‌ ಆಟೋ ರಿಕ್ಷಾವನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಗಿರಿಜಾ ಅವರು ರಸ್ತೆಗೆ ಬಿದ್ದು ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗಳ ಢಿಕ್ಕಿ; ಮೂವರಿಗೆ ಗಾಯ
ಬಂಟ್ವಾಳ: ಸಜೀಪಮೂಡ ಗ್ರಾಮದ ಬೇಂಕ್ಯದಲ್ಲಿ ಬೈಕ್‌ಗಳೆರಡು ಢಿಕ್ಕಿ ಹೊಡೆದುಕೊಂಡ ಪರಿಣಾಮ ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ಮಾ. 18ರಂದು ನಡೆದಿದೆ.

ಒಂದು ಬೈಕ್‌ ಸವಾರ ಜಲಾಲುದ್ದೀನ್‌, ಸಹಸವಾರ ಅಬ್ದುಲ್‌ ಸಲಾಂ ಹಾಗೂ ಮತ್ತೂಂದು ಬೈಕ್‌ ಸವಾರ ಸತ್ತಿವೇಲು ಗಾಯಗೊಂಡವರು. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಜಲಾಲುದ್ದೀನ್‌ ಹಾಗೂ ಸತ್ತಿವೇಲು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಘಟನೆಯ ಕುರಿತು ಅಬ್ದುಲ್‌ ಸಲಾಂ ಪೊಲೀಸರಿಗೆ ದೂರು ನೀಡಿದ್ದು, ಸವಾರ ಸತ್ತಿವೇಲು ಬೈಕನ್ನು ದುಡುಕುತನ ಹಾಗೂ ನಿರ್ಲಕ್ಷÂದಿಂದ ಚಲಾಯಿಸಿ ಢಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next