Advertisement
ಮತ್ತೂಮ್ಮೆ ದಾಳಿ ಮಾಡಿದರೆ ಮತ್ತಷ್ಟು ನಷ್ಟ: ಜ| ರಾವತ್
ಹೀರೋಗೆ ಡಬಲ್ ಪ್ರಮೋಷನ್
1999ರ ಯುದ್ಧದಲ್ಲಿ ಪಾಲ್ಗೊಂಡು ಪಾಕ್ನ ಕರ್ನಲ್ ಶೇರ್ ಖಾನ್ನನ್ನು ಕೊಂದ ಯೋಧ ಸತ್ಪಾಲ್ ಸಿಂಗ್ ಅವರಿಗೆ ಪಂಜಾಬ್ ಸರಕಾರ ಡಬಲ್ ಪ್ರಮೋಷನ್ ನೀಡಿದೆ. ಸಂಗ್ರೂರ್ ಜಿಲ್ಲೆಯ ಪಟ್ಟಣದಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರನ್ನು ಸಹಾಯಕ ಸಬ್-ಇನ್ಸ್ಪೆಕ್ಟರ್ ಆಗಿ ಪದೋನ್ನತಿ ನೀಡಲಾಗಿದೆ. ಸೇನೆ ತೊರೆದ ಬಳಿಕ ಅವರನ್ನು 2010ರಲ್ಲಿ ಪಂಜಾಬ್ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳಿಸಲಾಗಿತ್ತು. ಸಿಂಗ್ ದ್ರಾಸ್ ಸೆಕ್ಟರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
Related Articles
Advertisement
ಮೋದಿ ಫೋಟೋ ಟ್ವೀಟ್
ಕಾರ್ಗಿಲ್ ವಿಜಯ ದಿನ ಪ್ರಯುಕ್ತ 1999ರ ಹೋರಾಟದಲ್ಲಿ ಹುತಾತ್ಮರಾದ ಭಾರತ ಮಾತೆಯ ಪುತ್ರರಿಗೆ ಶ್ರದ್ಧಾಂಜಲಿ ಅರ್ಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಈ ದಿನ ನಮ್ಮ ಯೋಧರ ಧೈರ್ಯ, ಬದ್ಧತೆಯನ್ನು ತೋರಿಸುವ ದಿನ’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೂಂದು ಟ್ವೀಟ್ನಲ್ಲಿ ಅವರು 1999ರಲ್ಲಿ ಕಾರ್ಗಿಲ್ಗೆ ಭೇಟಿ ನೀಡಿದ್ದ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿಯ ಜಮ್ಮು- ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದುದಾಗಿ ಹೇಳಿದ್ದಾರೆ.
ರಾಹುಲ್, ಪ್ರಿಯಾಂಕಾರಿಂದ ಸ್ಮರಣೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುತಾತ್ಮರಿಗೆ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ. ‘ಕಾರ್ಗಿಲ್ ವಿಜಯ ದಿನದಂದು 20 ವರ್ಷಗಳ ಹಿಂದೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುತ್ತೇನೆ. ಅವರ ತ್ಯಾಗ, ಬಲಿದಾನ ಯಾವತ್ತೂ ಅನುಸರಣೀಯ ಮತ್ತು ಸ್ಮರಣೀಯ’ ಎಂದಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಟ್ವೀಟ್ ಮಾಡಿ, ಬಹಳಷ್ಟು ಶ್ರಮ, ಹೋರಾಟದ ಅನಂತರ ಯೋಧರು ತ್ರಿವರ್ಣಧ್ವಜವನ್ನು ಆಗಸದೆತ್ತರಕ್ಕೆ ಹಾರಿಸಿದ್ದಾರೆ. ದೇಶದ ಸಾರ್ವಭೌಮತ್ವಕ್ಕಾಗಿ ಅವರ ಹೋರಾಟ ಯಾವತ್ತೂ ನೆನಪಿನಲ್ಲಿ ಇಟ್ಟುಕೊಳ್ಳುವಂಥದ್ದು. ಕಾರ್ಗಿಲ್ ಹೋರಾಟದ ಮೂಲಕ ಪ್ರಾಣ ತ್ಯಾಗ ಮಾಡಿದವರನ್ನು ಯಾವತ್ತೂ ಸ್ಮರಿಸುತ್ತೇವೆ ಎಂದಿದ್ದಾರೆ.
ಶಿಕ್ಷಣ ಸಂಸ್ಥೆಗಳ ಸ್ಥಾಪಿಸುವಾಸೆ
ಜಮ್ಮು -ಕಾಶ್ಮೀರದ ದೋಡಾದಲ್ಲಿ 1999ರಲ್ಲಿ ನಡೆದ ಹತ್ಯಾಕಾಡದಲ್ಲಿ ಬದುಕಿ ಉಳಿದ ಜೋಗಿಂದರ್ ಸಿಂಗ್ ತಮ್ಮ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಉದ್ದೇಶ ಹೊಂದಿದ್ದಾರೆ. ಸದ್ಯ ಅವರು ಪುಣೆಯಲ್ಲಿ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಸರ್ಕಾರಿ ಉದ್ಯೋಗಕ್ಕಾಗಿ ಅಲೆದು ಬೇಸತ್ತಿರುವ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. 1999ರ ಜು.19ರಂದು ಕಾರ್ಗಿಲ್ ಯುದ್ಧ ಕೊನೆಯ ಹಂತದಲ್ಲಿರುವಾಗ ದೋಡಾ ಜಿಲ್ಲೆಯ ಲೆಹೋಟಾ ಗ್ರಾಮಕ್ಕೆ ನುಗ್ಗಿದ್ದ ಗುಂಪೊಂದು 15 ಮಂದಿಯನ್ನು ಕೊಂದಿತ್ತು. ಅದರಲ್ಲಿ ಹೆಚ್ಚಿನವರು ಜೋಗಿಂದರ್ರ ಕುಟುಂಬಸ್ಥರೇ ಆಗಿದ್ದರು.
ರಾಷ್ಟ್ರಪತಿಯಿಂದ ಗೌರವ ನಮನ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ಶ್ರೀನಗರದ ಸೇನೆಯ 15 ಕಾಪ್ಸ್ರ್ ಪ್ರಧಾನ ಕಚೇರಿಯಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮರಿಗೆ ಪುಷ್ಪಾಂಜಲಿ ಸಲ್ಲಿಸಿದರು. ನಿಯೋಜಿತ ಕಾರ್ಯಕ್ರಮದಂತೆ ಅವರು ದ್ರಾಸ್ಗೆ ತೆರಳಬೇಕಾಗಿತ್ತು. ಪ್ರತಿಕೂಲ ಹವಾ ಮಾನದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳದೆ ಶ್ರೀನಗರ ದ ಕಾರ್ಯಕ್ರಮದಲ್ಲಿ ಭಾಗಿಯಾದರು.
ಪಾಠ ಕಲಿಯದ ಪಾಕ್
ಇಪ್ಪತ್ತು ವರ್ಷಗಳ ಹಿಂದೆ ಪಾಕಿಸ್ಥಾನ ಕಾರ್ಗಿಲ್ನಲ್ಲಿ ಸೋಲು ಅನುಭವಿಸಿತ್ತು. ಇದರ ಹೊರತಾಗಿಯೂ ಆ ದೇಶ ಪಾಠ ಕಲಿತಿಲ್ಲ ಎಂದು ಸೇನೆಯ ಪೂರ್ವ ಭಾಗದ ಕಮಾಂಡರ್ ಲೆ| ಜ| ಎಂ.ಎಂ. ನರವಾನೆ ಹೇಳಿದ್ದಾರೆ. ಸೇನೆ ಯಾವುದೇ ಸಂದರ್ಭದಲ್ಲಿ ದೇಶಕ್ಕಾಗಿ ಕಾರ್ಯ ನಿರ್ವಹಿಸಲು ಸಿದ್ಧವಾಗಿಯೇ ಇದೆ ಎಂದು ಕೋಲ್ಕತಾದ ಕಾರ್ಯಕ್ರಮಗದಲ್ಲಿ ಹೇಳಿದ್ದಾರೆ.