Advertisement
ಹಲವಾರು ವರ್ಷಗಳಿಂದ ಪಟ್ಟಣದ ಬಿ.ಎಚ್.ರಸ್ತೆ, ತಾಲೂಕು ಕ್ರೀಡಾಂಗಣ ರಸ್ತೆ ಹಾಗೂ ತೀನಂಶ್ರೀ ಭವನ ಸುತ್ತ ಮುತ್ತ ನಡೆಯುತ್ತಿದ್ದ ವಾರದ ಸಂತೆಯನ್ನು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ಕಾರಣದಿಂದ ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹಿನ್ನೆಲೆಯಲ್ಲಿ ಡಿ.16 ಸೋಮವಾರದಿಂದ ಎಪಿಎಂಸಿ ಆವರಣದಲ್ಲಿ ಸಂತೆ ನಡೆಸಬೇಕು ಎಂದು ಪುರಸಭೆ ವ್ಯಾಪಾರಸ್ಥರಿಗೆ ತಿಳಿಸಿತ್ತು.
Related Articles
Advertisement
ಡಿ.16ರಿಂದ ಪಟ್ಟಣದ ವಾರದ ಸಂತೆ ಎಪಿಎಂಸಿ ಆವರಣದಲ್ಲಿ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಇವರ ಆದೇಶದಂತೆ ಎಪಿಎಂಸಿ ಆವರಣ ಸ್ವಚ್ಛಗೊಳಿಸಿ ಸಂತೆ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ಸಂತೆಯಿಂದ ಬರುವ ಹಣ ಪುರಸಭೆ ನಿಧಿಗೆ ಸೇರುತ್ತದೆ.-ರವಿಕುಮಾರ್, ಪುರಸಭೆ ಆರ್ಐ ಪುರಸಭೆ ಸಭೆಯಲ್ಲಿ ಸಂತೆ ನಡೆಸಲು ಎಲ್ಲರಿಗೂ ಅನುಕೂಲವಾಗುವಂತೆ ಸರ್ಕಾರಿ ಜಾಗ ಗುರುತಿಸುವಂತೆ ಸಚಿವ ಜೆ.ಸಿ.ಮಾಧುಸ್ವಾಮಿ ಉಪಸ್ಥಿತಿಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಪುರಸಭೆ ಅಧಿಕಾರಿಗಳು ಸರ್ಕಾರಿ ಜಾಗ ಗುರುತಿಸುವಲ್ಲಿ ವಿಫಲರಾಗಿದ್ದರು. ಏಕಾಏಕಿ ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡುತ್ತಿರುವುದು ಸೂಕ್ತವಲ್ಲ.
-ಸಿ.ಡಿ.ಚಂದ್ರಶೇಖರ್, ಪುರಸಭೆ ಮಾಜಿ ಅಧ್ಯಕ್ಷ ಎಪಿಎಂಸಿ ಆವರಣದಲ್ಲಿ ಸಂತೆ ಮಾಡಲು ಹೊರಟಿರುವುದು ಖಂಡನೀಯ. ಸಂತೆ ಮಾಡಲು 3 ಕಿ.ಮೀ ಹೋಗಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಭಾನುವಾರ ಸಂತೆ ಮಾಡಲು ನಿರ್ಧರಿಸಬಹುದು. ಇದು ತೀನಂಶ್ರೀ ಭವನ ಸುತ್ತಮತ್ತ ಅಭಿವೃದ್ಧಿಪಡಿಸಲು ಮಾಡಿರುವ ಸಂಚು ಅಷ್ಟೇ.
-ಸಿ.ಬಿ.ರೇಣುಕಸ್ವಾಮಿ, ಕನ್ನಡ ಸಂಘ ಅಧ್ಯಕ್ಷ ಸೋಮವಾರ ಸಂತೆ ಪ್ರಸ್ತುತ ಜಾಗದಿಂದ ಸ್ಥಳಾಂತರವಾಗಬೇಕು. ಆದರೇ ಎಪಿಎಂಸಿ ಆವರಣಕ್ಕೆ ಸ್ಥಳಾಂತರವಾಗಬಾರದು. ಸಿವಿಲ್ ಬಸ್ ನಿಲ್ದಾಣದ ಸಮೀಪದಲ್ಲಿರುವ ಕುರುಬರಹಳ್ಳಿ ಬಳಿ ಪುರಸಭೆಗೆ ಸಂಬಂಧಿಸಿದ ಜಾಗವಿದ್ದು, ಅಲ್ಲಿ ಸಂತೆ ಮಾಡಬೇಕು.
-ಮಂಜುನಾಥ್, ಆಟೋ ಚಾಲಕ ಪ್ರಸ್ತುತ ಸ್ಥಳದಲ್ಲಿ ಸೋಮವಾರದಂದು ಸಂತೆ ನಡೆದರೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತದೆ. ಶಾಲಾ ವಾಹನಗಳು ಓಡಾಡಲು ಜಾಗವಿರುವುದಿಲ್ಲ. ಈ ಜಾಗದಿಂದ ಸಂತೆ ಸ್ಥಳಾಂತರವಾದರೆ ಒಳ್ಳೆಯದು. ಆದರೆ ಸಾರ್ವಜನಿಕರಿಗೆ ಸಂತೆಗೆ ಹೋಗಲು ಹತ್ತಿರವಿದ್ದರೆ ಒಳ್ಳೆಯದು.
-ಮನೋಹರ್, ಕಾಲೇಜು ವಿದ್ಯಾರ್ಥಿ