Advertisement

ತಲೆ ತಿರುಗಿ ಬಿದ್ದು ವ್ಯಕ್ತಿ ಸಾವು

08:02 PM May 09, 2024 | Team Udayavani |

ಗಂಗೊಳ್ಳಿ: ಇಲ್ಲಿನ ಬಂದರು ಪರಿಸರದ ನಿವಾಸಿ ರವಿ ಖಾರ್ವಿ (44) ಅವರು ಮೇ 7ರ ಬೆಳಗ್ಗೆ ತಲೆಸುತ್ತಿ ಬಿದ್ದು ಮೃತಪಟ್ಟಿದ್ದಾರೆ.

Advertisement

ತಲೆಗೆ ಕಲ್ಲು ತಾಗಿದ ಪರಿಣಾಮ ವಿಪರೀತ ರಕ್ತಸ್ರಾವವಾಗಿದ್ದ ಅವರನ್ನು ಕೂಡಲೇ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮೇ 8ರಂದು ಅಪರಾಹ್ನ 1.45ರ ಸುಮಾರಿಗೆ  ಸಾವನ್ನಪ್ಪಿದ್ದಾರೆ. ಇವರು ಸುಮಾರು ವರ್ಷದಿಂದ ಮನೆಗೆ ಹೋಗುತ್ತಿರಲಿಲ್ಲ ಎನ್ನಲಾಗಿದೆ.

ಪತ್ನಿ ಶಾರದಾ ಗಂಗೊಳ್ಳಿ  ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next